ಈ ಕೆರೆಯಲ್ಲಿ ಮೊಸಳೆ ಇದೆ : ಜಾನುವಾರಗಳನ್ನು ಜನ ಬಿಡುವ ಮುನ್ನ ಎಚ್ಚರಿಕೆ….!

ರಾಯಚೂರಿನ ಮನ್ಸಲಾಪೂರ ಗ್ರಾಮದ ಕೆರೆಯಲ್ಲಿ ಮೊಸಳೆ ಪ್ರತ್ಯೇಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಹೌದು… ಮನ್ಸಲಾಪೂರ ಗ್ರಾಮದ ಕೆರೆಯ ಕಲ್ಲಿನ ಗುಂಡಿನ ಮೇಲೆ ಮೊಸಳೆ ಕಂಡಿತ್ತು. ನಾಗರಾಜ ಎನ್ನುವ ಯುವಕ ಮೊಸಳೆ ಕಂಡಿದ್ದನ್ನು ನೋಡಿ ಪೋಟೋ ಸೆರೆಯಿಡಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆರೆಯಲ್ಲಿನ ಮೊಸಳೆ ಕಂಡಿದ್ದ ಪೋಟೊ ವೀಕ್ಷಿಸಿ ಮೊಸಳೆ ಇರುವುದ ಖಾತರಿ ಪಡಿಸಿದ್ದಾರೆ. ಗ್ರಾ.ಪಂ.ಗೆ ಮಾಹಿತಿ ನೀಡಿ ಕೆರೆಯ ಸುತ್ತಮುತ್ತ ಜನರು ಸುಳಿಯದಂತೆ ಕೆರೆಯಲ್ಲಿ ಜನುವಾರುಗಳು ತೆರಳದಂತೆ ಸೂಚನೆ ಫಲಕ ಹಾಕಲು ತಿಳಿಸಿದರು. ಗ್ರಾಮದ ಜನರಿಗೂ ಮಾಹಿತಿ ನೀಡಲು ಗ್ರಾಮದಲ್ಲಿ ಡಂಗೂರ ಹೊಡೆಸಿ ಗ್ರಾಮದ ಹತ್ತಿರ ಯಾರೂ ತೆರಳದಂತೆ ಮಾಹಿತಿ ನೀಡಲಾಗಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights