ಕರುನಾಡಿಗೆ ‘ಮಹಾ’ ಕಂಟಕ : ಹೊಸದಾಗಿ 75 ಕೊರೊನಾ ಪ್ರಕರಣ – 46 ಕೇಸ್ ಗೆ ಮಹಾರಾಷ್ಟ್ರ ನಂಟು
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಬಾರದೇ ಹೋದರೂ ಇಂದು ಕೊಂಚ ನೆಮ್ಮದಿ ವಿಚಾರ ಕೊಟ್ಟಿದೆ. ಇಂದು ಹೊಸದಾಗಿ 75 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, ಈ ಪೈಕಿ 46 ಸೋಂಕಿತರಿಗೆ ಮಹಾರಷ್ಟ್ರ ನಂಟಿದ್ದರೆ, ಇನ್ನುಳಿದವರಿಗೆ ಬೇರೆ ರಾಜ್ಯಗಳ ಹಾಗೂ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ.
ಹೌದು… ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿ ಪ್ರಕಾರ ಇಂದು 75 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ 2493 ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇವರಲ್ಲಿ ಗುಣಮುಖರಾಗಿ 809 ಜನ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮದ್ಯಾಹ್ನದ ವರೆಗೆ 28 ಜನ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ದಾಖಲಾದ 75 ಹೊಸ ಕೊರೊನಾ ಪ್ರಕರಣಗಳಲ್ಲಿ ವಿಜಯಪುರ 2, ಚಿತ್ರದುರ್ಗ 6, ಚಿಕ್ಕಮಗಳೂರು 3, ಹಾಸನ 13, ದಕ್ಷಿಣ ಕನ್ನಡ 6, ಕಲಬುರಗಿ 3, ಉಡುಪಿ 27, ರಾಯಚೂರು 1, ಯಾದರಿಗಿರಿ 7, ಬೆಂಗಳೂರು 7 ಪ್ರಕರಣಗಳು ದಾಖಲಾಗಿವೆ.
ಉಡುಪಿ 27 ಸೋಂಕಿತರ ಪೈಕಿ 25 ಮಹಾರಾಷ್ಟ್ರದ ಲಿಂಕ್ ಇದ್ದು ಇಬ್ಬರಿಗೆ ತೆಲಂಗಾಣ ಲಿಂಕ್ ಇದೆ. ಇನ್ನೂ ಹಾಸನದಲ್ಲಿ ದಾಖಲಾದ 13 ಪ್ರಕರಣಗಳ ಪೈಕಿ 10 ಜನರ ಸೋಂಕಿನ ಮೂಲವೇ ತಿಳಿದು ಬಂದಿಲ್ಲ. ಇದು ಸದ್ಯ ಾರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿದ್ದು, ಸೋಂಕಿನ ಮೂಲ ಪತ್ತೆಗೆ ಕಾರ್ಯಾರಂಭ ಮಾಡಿದ್ದಾರೆ. ಇಂದು ಮದ್ಯಾಹ್ನದ ವೇಳೆ 28 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.