ಕಾರಲ್ಲಿ ಆಕಸ್ಮಿಕ ಬೆಂಕಿ…! ತಿರುಪತಿಗೆ ಹೋದವರು ವಾಪಸ್ಸು ಬರಲೇ ಇಲ್ಲ…
ಕಾರಲ್ಲಿ ಆಕಸ್ಮಿಕ ಬೆಂಕಿ ಐವರು ಸಜೀವ ದಹನವಾದ ಘಟನೆ ಆಂದ್ರದ ಚಿತ್ತೂರು ಜಿಲ್ಲೆ ಪಲಮನೇರು ತಾಲೂಕಿನ ಗಂಗವರಂ ಹೋಬಳಿಯಲ್ಲಿ ನಡೆದಿದೆ.
ಗಂಗವರಂ ನಿಂದ ಮಾಮಡುಗು ಗ್ರಾಮಕ್ಕೆ ತೆರಳುವಾಗ ಕಾರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಜಾಹ್ನವಿ, ಕಲಾ, ಭಾನುತೇಜ, ಪಾವನ ರಾಮ್, ಸಾಯಿ ಆಶ್ರಿತ, ವಿಷ್ಣು ಎನ್ನುವರಿದ್ದ ಕಾರು ಸಂಪೂರ್ಣವಾಗಿ ಭಸ್ಮವಾಗಿ 6 ಮಂದಿಯಲ್ಲಿ ಐವರು ಸಜೀವ ದಹನವಾಗಿದ್ದಾರೆ.
ಕುಟುಂಬಸ್ತರು ತಿರುಪತಿಯಿಂದ ಬೆಂಗಳೂರಿಗೆ ವಾಪಾಸ್ ಬರ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ತಳಕ್ಕೆ ದಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಓರ್ವನನ್ನ ರಕ್ಷಿಸಿದ್ದಾನೆ. ಪಲಮನೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮಾಡಲಾಗುತ್ತಿದೆ.