ಕುಮಾರಸ್ವಾಮಿ ಸಿಡಿ ಬಿಡುಗಡೆ – ಕೆಲಸವಿಲ್ಲದೆ ಇದನ್ನು ಮಾಡ್ತಿದಾರೆ ಅಂದ ಕಾರಜೋಳ
ಮಂಗಳೂರು ಗಲಾಟೆ ವಿಚಾರಕ್ಕೆ ಸಂಬಂಧಿಸಿ ಎಚ್.ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸದ್ಯ ಕುಮಾರಸ್ವಾಮಿ ಖಾಲಿ ಇದ್ದಾರೆ. ಹೀಗಾಗಿ ಕೆಲಸವಿಲ್ಲದೆ ಸರ್ಕಾರದ ಮೇಲೆ ಏನಾದರೂ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಿಡಿಯಲ್ಲಿ ಇರೋ ಅಂಶದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ನಮ್ಮದು ಜನರ ಭಾವನೆಗಳನ್ನ ಅರಿತುಕೊಂಡು ಆಡಳಿತ ಮಾಡುವ ಪಕ್ಷ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ನಿಷ್ಪಕ್ಷಪಾತ ಜನಪರ ಆಡಳಿತ ಮಾಡೋದಕ್ಕೆ ದೇಶದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದಾರೆ. ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡೋದಕ್ಕೆ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.
ದೇಶದ್ರೋಹಿಗಳು ಕಿಡಿಗೇಡಿಗಳನ್ನ ಸಮಾಜಘಾತ ಶಕ್ತಿಗಳನ್ನು ಹತ್ತಿಕ್ಕಿಸುವ ಕೆಲಸ ನಡೆದಿದೆ. ಕಳೆದ 70 ವರ್ಷಗಳಿಂದ ಕೂಡ ನಡೆದಿದ್ದು, ಮುಂದೆಯೂ ಕೂಡ ನಡೆಯುತ್ತೆ ಎಂದರು.