ಕೋಟಿಲಿಂಗ ದೇಗುಲದಲ್ಲಿ ಉಚಿತ ಅನ್ನದಾನ ಸ್ಥಗಿತ : ಉಚಿತ ಅನ್ನದಾನಕ್ಕೆ ವಿಷ ಬೆರೆಸಲು ನಡೆದಿತ್ತಾ ಸಂಚು?

ಕೋಲಾರ ಕೋಟಿಲಿಂಗ ದೇಗುಲದಲ್ಲಿ ಉಚಿತ ಅನ್ನದಾನ ಸ್ಥಗಿತಗೊಂಡಿದ್ದು, ಉಚಿತ ಅನ್ನದಾನಕ್ಕೆ ವಿಷ ಬೆರೆಸಲು ಸಂಚು ನಡೆದಿತ್ತಾ ಅನ್ನೋ ಅನುಮಾನ ಶುರುವಾಗಿದೆ.

ಹೌದು.. ಕೋಲಾರ ಜಿಲ್ಲೆಯ ಕೆಜಿಎಪ್ ತಾಲೂಕಿನ ಕಮ್ಮಸಂದ್ರ ಗ್ರಾಮದ ಕೋಟಿಲಿಂಗ ದೇಗುಲದಲ್ಲಿ ಆಡಳಿತ ಮಂಡಳಿ ದಿನಕ್ಕೆ ೧ ಸಾವಿರ ಭಕ್ತರಿಗೆ ಉಚಿತ ಅನ್ನದಾನ ನಡೆಸಿಕೊಂಡು ಬರ್ತಿತ್ತು. ಆದರೆ  ಅನ್ನದಾನ ನಡೆಸದಂತೆ ಸ್ಥಗಿತ ಮಾಡುವಂತೆ ಜಿಲ್ಲಾಧಿಕಾರಿ ಜೆ ಮಂಜುನಾಥ್ ದಿಢೀರ್ ಸೂಚನೆ ನೀಡಿದ್ದಾರೆ.

ದೇವಸ್ಥಾನದ ನೂತನ ಧರ್ಮಾಧಿಕಾರಿ ಶಿವಪ್ರಸಾದ್ ಹಾಗೂ ಕಾರ್ಯದರ್ಶಿ ಕೆವಿ ಕುಮಾರಿ ಮಧ್ಯೆ ಎರಡು ಗುಂಪು ಸಂಭವಿಸಿವೆ. ಸದ್ಯ ದೇಗುಲ ಆಸ್ತಿಗಾಗಿ ಶಿವಪ್ರಸಾದ್ ಹಾಗು ಕುಮಾರಿ ಕೆಜಿಎಪ್ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ತಾನದ ಅನ್ನದಾನದಲ್ಲಿ ವಿಷ ಬೆರೆಸೊ ಸಂಚು ಗಮನಕ್ಕೆ ಬಂದಿದೆ. ಎರಡು ಬಣದವರು ದೇಗುಲದಲ್ಲಿ ಕೆಲಸ ಮಾಡ್ತಿರೊದ್ರಿಂದ ಮುಂಜಾಗ್ರತಾ ಕ್ರಮವಾಗಿ ಅನ್ನದಾನಕ್ಕೆ ಬ್ರೇಕ್ ಹಾಕಲಾಗಿದೆ.

ಆಸ್ತಿ ಪ್ರಕರಣ ಇತ್ಯರ್ಥ ವಾಗೋ ವರೆಗೂ ದೇಗುಲವನ್ನ ಕೆಜಿಎಪ್ ನ್ಯಾಯಾಲಯ ಕೋಲಾರ ಜಿಲ್ಲಾಡಳಿತ ವಶಕ್ಕೆ ನೀಡಿದೆ. ಜಿಲ್ಲಾಧಿಕಾರಿ ಜೆ ಮಂಜುನಾಥ್ ಉಚಿತ ಅನ್ನದಾನವನ್ನು ತಡೆ ಹಿಡಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights