ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ : ರಸ್ತೆಯಲ್ಲಿಯೇ ಬಿಸಾಡಿದ ಬ್ಲೆಡ್ ಶಾಂಪಲ್ ಬಾಟಲ್ಸ್
ಖಾಸಗಿ ಆಸ್ಪತ್ರೆಗಳ ನಿರ್ಲಕ್ಷತನದಿಂದ ರೋಗಿಗಳ ರಕ್ತ ಪರೀಕ್ಷೆ ನಡೆಸಿದ ಬ್ಲಡ್ ಶಾಂಪಲ್ ಬಾಟಲುಗಳು ರಸ್ತೆಯಲ್ಲಿಯೇ ಬಿಸಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದದಲ್ಲಿ ನಡೆದಿದೆ.
ಹೌದು… ಸಾರ್ವಜನಿಕರು ಓಡಾಡುವ ರಸ್ತೆಯಲ್ಲೆ ಬಿಸಾಡಿದ ರಕ್ತ ತುಂಬಿದ ಶಾಂಪಲ್ ಬಾಟಲ್ ಗಳನ್ನು ಕಂಡು ಜನ ಆತಂಕಗೊಂಡಿದ್ದಾರೆ. ಸಿಂಧನೂರು ನಗರದ ರೇಣುಕಾ ಮತ್ತು ಸಹನಾ ಆಸ್ಪತ್ರೆ ಇರುವ ರಸ್ತೆಯ ಮೇಲೆ ರಕ್ತ ಪರಿಕ್ಷಾ ಬಾಟಲಗಳನ್ನ ಬೀಸಾಡಲಾಗಿದೆ. ರಸ್ತೆಯಲ್ಲಿ ಬಿದ್ದ ಶಾಂಪಲ್ ಬಾಟಲ್ ನೋಡಿ ಸಾರ್ವಜನಿಕರು ಆಸ್ಪತ್ರೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರದಲ್ಲಿ ಈ ಹಿಂದೆ ಹಲವಾರು ಬಾರಿ ಇಂತಹ ಘಟನೆಗಳು ಜರುಗಿದ್ದರು ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದದಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಧೋರಣೆಗೆ ಈ ಫೋಟೋಗಳು ಸಾಕ್ಷಿಯಾಗಿವೆ.