ಗುರುಗಳ ಸೇವಕನಿಂದಲೇ ಮಠದಲ್ಲಿ ಚಿನ್ನಾಭರಣ ಕಳುವು : ಪೊಲೀಸರಿಗೆ ಸಿಕ್ಕ ಖದೀಮನ ಬಂಧನ

ಮೈಸೂರಿನ ಕೆ.ಆರ್.ನಗರ ಪೊಲೀಸರ ಕಾರ್ಯಾಚರಣೆಯಿಂದಾಗಿ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದಲ್ಲಿ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಖದೀಮನ ಬಂಧನದಿಂದಾಗಿ ಮಠದ ಗುರುಗಳ ಸೇವಕನಿಂದಲೇ ಕಳುವು ನಡೆದಿದೆ ಅನ್ನೋ ಸತ್ಯ ತಿಳಿದು ಬಂದಿದೆ. ಆರೋಪಿಯಿಂದ 5 ಲಕ್ಷ 10 ಸಾವಿರ ಮೌಲ್ಯದ 143 ಗ್ರಾಂ ಚಿನ್ನಾಭರಣ ವಶ ಪಡೆದುಕೊಳ್ಳಲಾಗಿದ್ದು, ಗುರುರಾಜ ಕುಲಕರ್ಣಿ (34) ಬಂಧಿತ ಆರೋಪಿ. ಈತ ಗುರುಗಳ ಸೇವಕನಾಗಿದ್ದ, ಜೊತೆಗೆ ಶ್ರೀ ಚಕ್ರದ ಅಲಂಕಾರಕ್ಕೆ ಬಳಸಲಾಗುತ್ತಿದ್ದ ಚಿನ್ನಾಭರಣ ಕದ್ದಿದ್ದ.

ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದ ಚಿನ್ನಾಭರಣ ಕಳುವು ಮಾಡಿದ್ದ ಗುರುರಾಜ ಕುಲಕರ್ಣಿಯನ್ನು ಸದ್ಯ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights