ದಳಪತಿಗಳ ವಿರುದ್ದ ಮಂಡ್ಯ ಸಂಸದೆ ಗರಂ : ವ್ಯಂಗ್ಯವಾಡಿದ್ದ ಮಾಜಿ ಸಿ.ಎಂ.ಗೆ ಸುಮಲತಾ ತಿರುಗೇಟು

ದಳಪತಿಗಳ ವಿರುದ್ದ ಮಂಡ್ಯ ಸಂಸದೆ ಗರಂ ಆಗಿದ್ದಾರೆ. ಹೌದು.. ಮಾಜಿ ಸಿಎಂ. ಮತ್ತು ಮಾಜಿ ಸಂಸದೆ ವಿರುದ್ದ ಸಂಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ ರೈತರಿಗೆ ಸಮಸ್ಯೆ ಬಂದಾಗ ಬಗೆ ಹರಿಸ್ತೀನಿ ಎಂದಿದ್ದ ಜೋಡೆತ್ತುಗಳು ಈಗ ಎಲ್ಲಿ ಹೋದವು ಎಂದಿದ್ದ ಮಾಜಿ ಸಂಸದ ಶಿವರಾಮೇಗೌಡ ವಿಚಾರ ಹಾಗೂ  ಜಿಲ್ಲೆಯಲ್ಲಿ ರೈತರ ಸಮಸ್ಯೆ ತಾಂಡವವಾಡ್ತಿದ್ರು ಸ್ವಾಭಿಮಾನಿ ಸಂಸದೆ ಎಲ್ಲಿದ್ದಾರೆ..? ನ್ಯೂಯಾರ್ಕ್ ಬ್ಯುಸಿಯಾನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು ಕೊಟ್ಟಿದ್ದಾರೆ.

ಜನರಿಗೆ ಯಾರು ಏನು ಎಂಬುದು ಗೊತ್ತಾಗಿದೆ. ಹೊರ ದೇಶದಲ್ಲಿ ಯಾರಿದ್ರು, ಹೇಗಿದ್ರು ಎಂಬುದು ಪೋಟೋಸ್ ರಿಲೀಸ್ ಆಗಿದೆ. ಅವರ ಪಕ್ಷದ ೮ ಜನ ಶಾಸಕರು ಇದ್ದಾರೆ. ಅಧಿಕಾರದಲ್ಲಿರುವ ಶಾಸಕರನ್ನು ಒತ್ತಾಯಿಸುವ ಬದಲು ಜೋಡೆತ್ತುಗಳ ಮೇಲೆ ಏಕೆ ಟೀಕೆ ಎಂದು ಮಾಜಿ ಸಂಸದನಿಗೆ ಟಾಂಗ್ ಕೊಟ್ಟಿದ್ದಾರೆ.

ನಾನೊಬ್ಬಳು ಗೆದ್ದ ಮೇಲೆ ಉಳಿದವರ ಜವಬ್ದಾರಿ ಮುಗಿದಿದೆಯಾ? ಅಥವಾ ಅವರ ಸೌಲಭ್ಯಗಳು ಕಡಿತವಾಗಿಯಾ ಎಂದು ಟಾಂಗ್ ಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights