ಬೈ ಎಲೆಕ್ಷನ್ ಡೇಟ್ ಫಿಕ್ಸ್ : 15 ಕ್ಷೇತ್ರಗಳಲ್ಲಿ ಉಪಚುನಾವಣೆ

ಬೈ ಎಲೆಕ್ಷನ್  ದಿನಾಂಕ್ ಫಿಕ್ಸ್ ಆಗಿದ್ದು ಅನರ್ಹ ಶಾಸಕರರಲ್ಲಿ ಆತಂಕ ಶುರುವಾಗಿದೆ. ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು, 24 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಸೆಪ್ಟಂಬರ್ 30 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 17 ಕ್ಷೇತ್ರಗಳ ಪೈಕೆ 15 ಕ್ಷೇತ್ರಗಳಿಗೆ ಮಾತ್ರ ದಿನಾಂಕ ನಿಗಧಿಯಾಗಿದೆ. ಇನ್ನುಳಿದ ೆರಡು ಕ್ಷೇತ್ರಗಳಿಗೆ ದಿನಾಂಕ ನಿಗಧಿಯಾಗಿಲ್ಲ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆಯಾಗಿದ್ದು ಇದರಲ್ಲಿ ಜೆಡಿಎಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ.  ಅನರ್ಹ ಶಾಸಕರ ಪಾಲಿಗೆ ಸೋಮವಾರ ಸುಪ್ರಿ ಕೋರ್ಟ್ ನೀಡಲಿರುವ ತೀರ್ಪು ಮಹತ್ವದ್ದಾಗಿದ್ದು, ತೀರ್ಪು ಆಧಾರದ ಮೇಲೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಣಯವಾಗಲಿದೆ.

ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ವಿವರ :-

ಯಲ್ಲಾಪುರ, ಯಶವಂತಪುರ, ವಿಜಯನಗರ, ಶಿವಾಜಿನಗರ, ಕೆಆರ್ ಪೇಟೆ, ಕೆಆರ್ ಪುರಂ, ಹುಣಸೂರು, ಹೊಸಕೋಟೆ, ಮಹಾಲಕ್ಷ್ಮಿ ಪುರಂ,  ರಾಣೆಬೆನ್ನೂರು ಕಾಗವಾಡ, ಮಸ್ಕಿ, ರಾಜರಾಜೇಶ್ವರಿ ನಗರ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights