ಸಿಡಿ ಬಿಡುಗಡೆ ಮಾಡುವುದರಲ್ಲಿ ಹೆಚ್.ಡಿ ಕುಮಾರಸ್ವಾಮಿ ನಿಸ್ಸೀಮರು – ಡಿವಿ ಸದಾನಂದಗೌಡ ವ್ಯಂಗ್ಯ

ಸಿಡಿ ಬಿಡುಗಡೆ ಮಾಡುವುದರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನಿಸ್ಸೀಮರು ಎಂದು  ಕುಮಾರಸ್ವಾಮಿ ಸಿಡಿ ಬಿಡುಗಡೆ ಸಂಬಂಧ ಮಂಡ್ಯದಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ಸಿಡಿ ಗಳು ಹಲವಾರು ಜನರಿಗೆ ತಮ್ಮ ರಾಜಕೀಯ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆ ಆಗಿವೆ. ಯಾವುದೇ ಫೇಕ್ ಸಿಡಿಗಳನ್ನ ಮಾಡೋದು, ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆಮೇಲೆ ಯಾರು ಅದರ ಹಿಂದೆ ಹೋಗುವುದಿಲ್ಲ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿ ಸಂಖ್ಯೆಗಳನ್ನ ನೋಡಿದ್ರೆ ಇಷ್ಟು ಹೊತ್ತಿಗೆ ಅದೆಷ್ಟೋ ಜನ ಜೈಲಿಗೆ ಹೋಗಬೇಕಿತ್ತು.

ತಮ್ಮ ತಾತ್ಕಾಲಿಕ ಬೆಳೆ ಬೇಯಿಸಿಕೊಳ್ಳಲು ಜನರನ್ನ ಬೇರೆ ದಾರಿಗೆ ಎಳೆಯಲು ಕೆಲವರು ಹೀಗೆ ಮಾಡ್ತಾರೆ. ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ. ಘಟನೆ ನಡೆದ ಕೆಲ ದಿನಗಳಲ್ಲೇ ಸಿಡಿ ರಿಲೀಸ್ ಮಾಡಬಹುದಿತ್ತು. ತಮ್ಮ ರಾಜಕೀಯ ಮೆಟ್ಟಿಲು ಕುಸಿಯುತ್ತಿರುವ ಈ ಸಂಧರ್ಭದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಾಚರಣೆ ಇದು.

ಅವರದ್ದೇ ಜನ ಕಳುಹಿಸಿ, ಅವರದ್ದೇ ಜನಕ್ಕೆ ಪೋಲಿಸ್ ವೇಷ ಹಾಕಿಸಿ ಎಲ್ಲಾ ವ್ಯವಸ್ಥೆ ಮಾಡಿ ಸಿಡಿ ಮಾಡಿಸಿರ ಬೇಕು. ಇದರ ಹಿಂದೆ ದೊಡ್ಡ ಹುನ್ನಾರವಿದೆ ಎಂದ ಕೇಂದ್ರ ಸಚಿವ ಡಿವಿಎಸ್ ವ್ಯಂಗ್ಯವಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights