ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ PFI &SDPI ಸಮರ : ರಾತ್ರೋರಾತ್ರಿ ಸಕ್ಕರೆನಾಡಲ್ಲಿ ಪ್ರಚೋದನಾ ಪೋಸ್ಟರ್ ಅಬ್ಬರ

ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದೆ. ಸುಪ್ರೀಂಕೋರ್ಟ್ ನ ಈ ತೀರ್ಪನ್ನು ಬಹುತೇಕ ಎರಡು ಸಮೂಹದವರು ಸ್ವಾಗತಿಸಿದ್ದು,ಹಿಂದು ಮುಸ್ಲಿಂ ಬಾಂಧ್ಯವ್ಯವನ್ನು‌ ಎತ್ತಿ‌ಹಿಡಿದು ಸಾಮರಸ್ಯ ಸಹಬಾಳ್ವೆಗೆ ಅವಕಾಶ ನೀಡಿದೆ ಅಂತಿದ್ರು.ಕೆಲವು ಮುಸ್ಲಿಂ ಸಂಘಟನೆಗಳು ಈ ತೀರ್ಪಿನ ವಿರುದ್ದ ದನಿ ಎತ್ತಿವೆ.‌ಶಾಂತಿಯಿಂದ ಬಗೆ ಹರಿಸಿಕೊಳ್ಳಲು ಮೇಲ್ಮನವಿಗೆ ಅವಕಾಶವಿದೆ‌ಯಾದ್ರು,ಬೇರೆ ಹೋರಾಟ ಮಾರ್ಗ‌ ಅನುಸರಿಸಲು‌ ಮುಂದಾಗಿದ್ದು ದೇಶದಲ್ಲಿ ಕೋಮು ಸೌಹಾರ್ದತೆ ಕದಡಲು‌ ಮುಂದಾಗಿವೆ. ಅದ್ರಲ್ಲೂ ಕರ್ನಾಟಕದಲ್ಲಿ PFI ಮತ್ತುSDPI ಮುಸ್ಲಿಂ ಸಂಘಟನೆಗಳು ಈ ಪ್ರಯತ್ನ‌ ಮಾಡ್ತಿದ್ದು ಸಕ್ಕರೆನಾಡಲ್ಲಿ ಶಾಂತಿ ಕದಡಲು ಮುಂದಾಗಿವೆ.

ಹೌದು ! ಸಕ್ಕರೆನಾಡು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ರಾಜ್ಯದಲ್ಲಿ ಸಕ್ರಿಯವಾಗಿರೋ ಮುಸ್ಲಿಂ ಸಂಘಟನೆಗಳಾದ PFI &SDPI ಶಾಂತಿ ಸೌಹಾರ್ಧತೆ ಕದಡುವ ಕೆಲಸಕ್ಕೆ ಮುಂದಾಗಿರೋ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಈ ಆರೋಪ ಮಾಡ್ತಿರೋದು‌ ಬೇರೆ ಯಾರು ಅಲ್ಲ. ಅಲ್ಲಿನ‌ ಸ್ಥಳೀಯ ಮುಸ್ಲಿಂ ಮುಖಂಡರುಗಳು.ಯಾಕೆಂದ್ರೆ ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್ ಅಯೋಧ್ಯೆ ವಿಚಾರದಲ್ಲಿ ಮಹತ್ತರವಾದ ತೀರ್ಪು ನೀಡಿತ್ತು.ಇದನ್ನು‌ ಹಿಂದು‌ ಮುಸ್ಲಿಂ ಆದಿಯಾಗಿ ಬಹುತೇಕರು‌ ಸ್ವಾಗತಿಸಿದ್ರು.ಈ ತೀರ್ಪಿನಿಂದ ಸಾಮರಸ್ಯ ಮತ್ತಷ್ಟು‌ ಬಿಗಿಯಾಗಲಿದೆ ಅಂತಿದ್ರು.ಆದ್ರೆ

PFI &SDPI ಶಾಂತಿ ಸೌಹಾರ್ಧತೆ ಕದಡುವ ಕೆಲಸಕ್ಕೆ ಮುಂದಾಗಿದೆ. ಮಂಡ್ಯ ಜಿಲ್ಲೆಯ‌ ಮದ್ದೂರಿನ ರಾಮ್ ರಹೀಂ‌ ನಗರದಲ್ಲಿ ಅಯೋಧ್ಯೆ ಬಾಬರಿ ಮಸೀದಿ ತೀರ್ಪು ವಿಚಾರದಲ್ಲಿ ಬಾಬರಿ ತೀರ್ಪು, ನ್ಯಾಯದ ನಿರಾಕರಣೆ, ನ್ಯಾಯಕ್ಕಾಗಿ ಧ್ವನಿಯೆತ್ತಿರಿ ಎಂಬ ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಗಳನ್ನು ಅಂಟಿಸಿ ಹೋಗಿದ್ದು.ಮದ್ದೂರನ ಮುಸ್ಲಿಂ‌ ಬಡಾವಣೆಯಲ್ಲಿ ಆಂತಕ ಉಂಟುಮಾಡಿದೆ.ಈ ಬಡಾವಣೆಯಲ್ಲಿ ಹಿಂದು ಮುಸ್ಲಿಂರು ವಾಸಮಾಡ್ತಿದ್ದು‌ ಸಹಬಾಳ್ವೆ ನಡೆಸ್ತಿದ್ದು, ಶಾಂತಿ ಕದಡಲು PFI &SDPI ಈ ತರಹ ಪೋಸ್ಟರ್ ರಾತ್ರಿ ಅಂಟಿಸಿ ಹೋಗಿದ್ದಾರೆಂದು ಸ್ಥಳೀಯರು ದೂರಿದ್ದು, ನಮಗೆ ತೀರ್ಪಿನ ಬಗ್ಗೆ ಅಸಮಧಾನವಿಲ್ಲ. ಈ ಪೋಸ್ಟರ್ ಗು ನಮಗೂ‌ ಸಂಬಂಧವಿಲ್ಲ ಇದೂ ಕೋಮಗಲಭೆ ಸೃಷ್ಟಿಸಲು ಮಾಡಿದ್ದು,ನಾವು ಸಹೋದರತ್ವದ ಸಹಬಾಳ್ವೆ ನಡೆಸ್ತಿದ್ದು ಯಾವ ಹಿಂದುಗಳು‌‌‌ ಆತಂಕ ಪಡುವ ಅಗತ್ಯ ಇಲ್ಲ ಅಂದಿದ್ದಾರೆ.

ಇನ್ನು ಮದ್ದೂರಿನ ರಾಮ್ ರಹೀಂ ನಗರದಲ್ಲಿ ರಾರಾಜಿಸ್ತಿರೋ ಈ ಪ್ರಚೋದನಾಕಾರಿ ಪೋಸ್ಟರ್ ನಲ್ಲಿ ಹೋರಾಟಕ್ಕೆ ಕರೆ ನೀಡಿರೋದು ಒಂದು‌ ಕಡೆ ಹಿಂದುಗಳಿಗೆ ಆತಂಕಕ್ಕೆ ಕಾರಣವಾಗಿದೆ.‌ಈ ಪ್ರಚೋದನಾಕಾರಿ ಪೋಸ್ಟರ್ ಗಳ ಸುದ್ದಿ ತಿಳಿದು ಪೊಲೀಸ್ ಇಲಾಖೆ‌ ಕ್ರಮಕ್ಕೆ ಮುಂದಾಗಿದ್ದು ಈ ಪೋಸ್ಟರ್ ತೆಗೆಯುವಂತೆ ಆ ಸಂಘಟನೆಯವರಿಗೆ ಸೂಚಿಸದೆ. ಸ್ಥಳೀಯವಾಗಿ ಎರಡು ಕೋಮುಗಳ ನಡುವೆ ಗಲಭೆಗೆ ಕಾರಣವಾಗಲಿದ್ದು ಈ ಪ್ರಚೋದನಾಕಾರಿ ಯಾರು ಅಂಟಿಸಿದ್ದಾರೆ ಅನ್ನೋದ್ನ‌ ತಿಳಿಯಲು‌ ಮುಂದಾಗಿದೆ.ಪ್ರಚೋದನಕಾರಿ ಪೋಸ್ಟರ್ ತೆಗೆಸಲು ಪೊಲೀಸ್ ಎಸ್ಪಿ ಸೂಚಿಸಿದ್ದು ಗಲಭೆಗೆ ಅವಕಾಸದ ನೀಡದಂತೆ ತಿಳಿಸಿದ್ದಾರೆ.

ಒಟ್ಟಾರೆ ಮದ್ದೂರಿನ‌ ಮುಸ್ಲಿಂ ಬಡಾವಣೆಯಲ್ಲಿ‌ ಈ ಪ್ರಚೋದನಾಕಾರಿ ಪೋಸ್ಟರ್ ಇದೀಗ ಸ್ಥಳೀಯವಾಗಿ ಸಾಮರಸ್ಯದಿಂದರೋ ಎರಡು ಕೋಮುಗಳ ನಡುವೆ ಗಲಭೆ ಕಾರಣವಾಗುವ ಸೂಚನೆ ಕಾಣ್ತಿದೆ.‌ಪೊಲೀಸ್ ಇಲಾಖೆ‌ ಎಚ್ಚತ್ತು‌ ಇದರ ವಿರುದ್ದ ಸೂಕ್ತ ಕ್ರಮವಹಿಸಬೇಕಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights