ಹರಪನಹಳ್ಳಿ ತಾಲ್ಲೂಕಿನಲ್ಲಿ ಅನಿಷ್ಟ ದೇವದಾಸಿ ಪದ್ದತಿ ಜೀವಂತ…!

ಹರಪನಹಳ್ಳಿ ತಾಲ್ಲೂಕಿನಲ್ಲಿ ಅನಿಷ್ಟ ದೇವದಾಸಿ ಪದ್ದತಿ ಇನ್ನೂ ಜೀವಂತವಾಗಿದೆ.

ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ಹಾಗೂ ದೇವದಾಸಿ ಪುನರ್ವಸತಿ ಅಧಿಕಾರಿಗಳಿಂದ ದೇವದಾಸಿ ಪದ್ದತಿಗೆ ತಳ್ಳುವ ಪ್ರಕರಣದಿಂದ ಯುವತಿಯ ರಕ್ಷಣೆ ಮಾಡಲಾಗಿದೆ. ಆಗಷ್ಟ್ ೨೩ ರಂದು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದಲ್ಲಿ ನಡೆದಿರುವ ಪ್ರಕರಣ ಇದು. ಮಗಳಿಗೆ ಮದುವೆ ಮಾಡಲು ಅಶಕ್ತರಾದ ಕಾರಣ ಪೋಷಕರು ದೇವದಾಸಿ ಪದ್ದತಿಗೆ ತಳ್ಳಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ೨೫ ವರ್ಷದ ಯುವತಿ ರಕ್ಷಣೆ ಮಾಡಲಾಗಿದೆ. ಯುವತಿಯ ಕೊರಳಲ್ಲಿ ಐದು ಬಿಳಿ ಮುತ್ತುಗಳಿರುವ ದಾರ, ಕೈಯಲ್ಲಿ ಹಸಿರು ಬಳೆ ಇರುವ ಬಗ್ಗೆ ದಾಖಲೆ ಲಭ್ಯವಾಗಿತ್ತು. ಗ್ರಾಮಸ್ಥರು ಯುವತಿ ಹಾಗೂ ಪೋಷಕ ವಿಚಾರಣೆ ವೇಳೆ ಅನಿಷ್ಟ ಪದ್ದತಿಗೆ ತಳ್ಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights