ವಿಷ್ಣು ಅರ್ಹತೆಗೆ ತಕ್ಕ ಮನ್ನಣೆ ಸಿಗಲಿಲ್ಲ; ಸಾಹಸಸಿಂಹನ ಜನ್ಮದಿನಕ್ಕೆ ಚಂದನವನದ ಮಾತು!

ಸ್ಯಾಂಡಲ್‌ವುಡ್‌ ಚಿತ್ರರಂಗದ ದಿಗ್ಗಜ, ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಹುಟ್ಟಿದ ದಿನವನ್ನು ವಿಷ್ಣು ಅಭಿಮಾನಿಗಳು ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ.

ವಿಷ್ಣುವರ್ಧನ್‌ ಅವರ ಒಡನಾಡಿಯಾಗಿದ್ದ ರಮೇಶ್‌ ಭಟ್‌ ಅವರು ವಿಷ್ಣುವನ್ನು ಸ್ಮರಿಸಿಕೊಂಡಿದ್ದು, ಕೆಲಸದ ಬಗೆಗಿನ ಅವರ ನಿಷ್ಠೆ, ಬದ್ಧತೆ ಅನನ್ಯ. ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದ ಸಹೃದಯಿ. ಕರುಣಾಮಯಿ, ಹೃದಯವಂತ, ಕರ್ಣ, ಸಾಹಸ ಸಿಂಹ, ಆಪ್ತರಕ್ಷಕ ಮುಂತಾದವು ಕೇವಲ ಚಿತ್ರಗಳ ಹೆಸರಲ್ಲ.  ಅವು ವಿಷ್ಣು ಅವರ ಅನ್ವರ್ಥ ನಾಮ. ಎಲ್ಲರ ಹೃದಯದಲ್ಲಿ ನೆಲೆಸಿರುವ ಸಹೃದಯಿ. ಅವರ ಅರ್ಹತೆಗೆ ತಕ್ಕ ಮನ್ನಣೆ ಸಿಕ್ಕಿಲ್ಲವೆಂಬ ಕೊರಗಿದೆ ಎಂದು ಅವರು ಹೇಳಿದ್ದಾರೆ.

ವಿಷ್ಣುವರ್ಧನ್‌ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಷ್ಣು ಅಳಿಯ ಅನಿರುದ್ದ್, “ಅವರ ಗುಣಗಳಿಗೆ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ‌ಅವರ ಸಜ್ಜನಿಕೆ.. ಬಹುಶಃ ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ ಸಾಧಿಸಲು ಪ್ರಮುಖ ಕಾರಣಕರ್ತರಾಗುವವರೆಂದರೆ ನನಗೆ ಅದು ವಿಷ್ಣು” ಎಂದು ಹೇಳಿದ್ದಾರೆ.

ಅಭಿನಯ ಭಾರ್ಗವ, ನಮ್ಮೆಲರ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ರವರ ೭೦ನೇ ವರ್ಷದ ಹುಟ್ಟುಹಬ್ಬದ ಸವಿನೆನಪಿನಲ್ಲಿ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ನಟ ದರ್ಶನ್ ಟ್ವೀಟ್‌ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights