ವಲ್ಲಭಘರ್ : ಇಸ್ಲಾಂ ಧರ್ಮ ಸ್ವೀಕರಿಸದ ಕಾರಣ ಯುವತಿಗೆ ಗುಂಡೇಟು : ಕುಟುಂಬಸ್ಥರ ಆಕ್ರೋಶ!
ಹರಿಯಾಣದ ಬಲ್ಲಭಘರ್ ನ ಅಗರ್ವಾಲ್ ಕಾಲೇಜು ಎದುರು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಯನ್ನು ಹತ್ಯೆಗೈದ ಪ್ರಕರಣ ಈಗ ಧಾರ್ಮಿಕ ಬಣ್ಣವನ್ನು ಪಡೆದುಕೊಂಡಿದೆ. ಮಗಳ ಕುಟುಂಬ ಸದಸ್ಯರು ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆಯಿಂದ ಸೆಕ್ಟರ್ -23 ರ ಸೊಹ್ನಾ ಮುಖ್ಯ ರಸ್ತೆಯಲ್ಲಿರುವ ಅಪ್ನಾ ಘರ್ ಸೊಸೈಟಿಯ ಎದುರು ವಿದ್ಯಾರ್ಥಿನಿ ನಿಕಿತಾಳ ಕುಟುಂಬ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.
ಕುಟುಂಬ ತಮ್ಮ ಮಗಳಿಗೆ ನ್ಯಾಯ ಒದಗಿಸಬೇಕು ಮತ್ತು ಆರೋಪಿಯನ್ನು ಬಂಧಿಸಲು ಒತ್ತಾಯಿಸುತ್ತಿದೆ. ಆರೋಪಿಗಳು ನಮ್ಮ ಮಗಳನ್ನು ಕೊಂದಿದ್ದಾರೆ ಎಂದು ವೀಡಿಯೊದಲ್ಲಿ ಸ್ಪಷ್ಟವಾಗಿ ಹೇಳಿ, ಆರೋಪಿಗೆ ತಕ್ಷಣವೇ ಶಿಕ್ಷೆಯಾಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಕ್ಕಾಗಿ ನಾವು 15 ವರ್ಷಗಳ ಕಾಲ ಕಾಯಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲ್ವಾಲ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. “ಕಾನೂನು ಮತ್ತು ಸುವ್ಯವಸ್ಥೆ ಮುರಿದು ಹಗಲು ಹೊತ್ತಿನಲ್ಲಿ ಹುಡುಗಿಯನ್ನು ಕೊಂದ ಈ ಪ್ರಾಣಿಗಳಲ್ಲಿ ಧೈರ್ಯ ಎಲ್ಲಿಂದ ಬರುತ್ತದೆ?” ಇದಕ್ಕೆ ಕಠಿಣ ಶಿಕ್ಷೆ ವಿಧಿಸುವಂತೆ ಹರಿಯಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಮ್ಮ ಮಗಳು ಬೇರೆ ಸಮುದಾಯದವಳು, ಎಲ್ಲಾ ಆಡಳಿತಾಧಿಕಾರಿಗಳು ಒಟ್ಟಿಗೆ ಸೇರಿ ನಮ್ಮ ಮಗುವಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ನಿಕಿತಾ ಅವರ ಕುಟುಂಬ ಹೇಳುತ್ತದೆ. ನಮ್ಮ ಮಗಳು (ಇಸ್ಲಾಂ) ಸಮುದಾಯದಿಂದ ಬಂದಿಲ್ಲ. ಹತ್ಯೆಯ ಆರೋಪಿ ಯುವತಿಯನ್ನು ಧರ್ಮವನ್ನು (ಇಸ್ಲಾಂ ಧರ್ಮದಲ್ಲಿ) ಬದಲಾಯಿಸಲು ಬಲವಂತವಾಗಿ ಪ್ರಯತ್ನಿಸುತ್ತಿದ್ದ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಹಾಗೆ ಮಾಡಲು ವಿಫಲವಾದ ನಂತರ, ಅವನು ಮೊದಲು ಹುಡುಗಿಯನ್ನು ಅಪಹರಿಸಲು ಪ್ರಯತ್ನಿಸಿದನು. ಅವನು ವಿಫಲವಾದಾಗ ಅವಳನ್ನು ಹೊಡೆದುರುಳಿಸಿದನು ಎಂದು ದೂರಿದೆ.