ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ 2 ಹಸು ಸಾವು….!
ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ 2 ಹಸು ಸಾವನ್ನಪ್ಪಿದ ಘಟನೆ ಮೈಸೂರಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಟ್ಟದೂರ ಗ್ರಾಮದ ರೈತ ಕೆಂಪಯ್ಯ ಅವರ ಹಸುಗಳು ಇವಾಗಿದ್ದವು. ಮನುಗನಹಳ್ಳಿ ಗೊಮ್ಮಟಗಿರಿ ರಸ್ತೆಯ ಜಮೀನಿಗೆ ಹಾಕಿದ್ದ ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಹಸುಗಳು ಸಾವನ್ನಪ್ಪಿವೆ.
ಹುಲ್ಲು ಮೇಯಲು ತೆರಳಿದ ವೇಳೆ ವಿದ್ಯುತ್ ಸ್ಪರ್ಶವಾಗಿದ್ದು ಹಸುಗಳನ್ನ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗಿದೆ.