ಅಪಾರ ಮಳೆಗೆ ನಾರಾಯಣಪುರ ಬಲದಂಡಾ ಕಾಲುವೆ ಒಡೆದು ಅಪಾರ ಹಾನಿ…

ಒಂದು ಕಡೆ ಅಪಾರ ಮಳೆ ಇನ್ನೊಂದು ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆ, ನಾರಾಯಣಪುರ ಬಲದಂಡಾ ಕಾಲುವೆ ಒಡೆದು ಅಪಾರ ಹಾನಿಯಾದ ಘಟನೆ ದೇವದುರ್ಗಾ ತಾಲೂಕಿನ ಗಲಗದ ಬಳಿ ನಡೆದಿದೆ.

ಗಲಗ ಭಾಗದಲ್ಲಿ ನಿನ್ನೆ ೧೪೭ ಎಂ ಎಂ ಮಳೆಯಾಗಿದೆ, ಇದೇ ವೇಳೆ ಸಿದ್ದನಕೇರಿ ಬಳಿ ಇರುವ ೧೨ ನೆಯ ವಿತರಣಾ ಕಾಲುವೆ ಒಡೆದು ಅಪಾರ ನಷ್ಟವಾಗಿದೆ, ಕಾಲುವೆಯ ನೀರು ಹೊಲಕ್ಕೆ ನುಗ್ಗಿದ್ದರಿಂದ ಬೆಳೆ ನಾಶವಾಗಿದೆ.

ಈಗಷ್ಟ ನಾಟಿ ಮಾಡಿದ ಭತ್ತ, ಹತ್ತಿ ಹಾಗು ತೊಗರಿ ಬೆಳೆಯು ನಾಶವಾಗಿದೆ, ಅಧಿಕಾರಿಗಳು ಕಾಲುವೆ ನಿರ್ವಹಣೆ ಮಾಡದೆ ಇರುವುದರಿಂದ ಕಾಲುವೆ ಒಡೆದು ನೀರು ಹರಿಯುತ್ತಿದೆ, ಅದರೊಂದಿಗೆ ರೈತರ ಬೆಳೆಯು ನಾಶವಾಗಿದೆ, ಈ ಬಗ್ಗೆ ಅಧಿಕಾರಿಗಳು ಬೇಗ ಕ್ರಮ ವಹಿಸಿ ಒಡೆದ ಕಾಲುವೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights