ಅವಳಿ ನಗರದಲ್ಲಿ ಹೆಚ್ಚಿದ ಕೊಲೆ : ಏಕಾಏಕಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ….!
ಧಾರವಾಡ : ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಹೆಚ್ಚಿದ ಕೊಲೆ ಹಾಗೂ ಚಾಕು ಇರಿತ ಪ್ರಕರಣ ಹಿನ್ನೆಲೆಯಲ್ಲಿ ಏಕಾಏಕಿ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ.
ಡಿಸಿಪಿ ನಾಗೇಶ, ಎಸಿಪಿ ರುದ್ರಪ್ಪಾ, ಸಿಪಿಐ ಮಹಾಂತೇಶ ಬಸಾಪೂರ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಧಾರವಾಡ ನಗರದ ಕೆಲವೊಂದು ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ.
ಮನೆ ತುಂಬೆಲ್ಲಾ ಮಾರಾಕಾಸ್ತ್ರಗಳನ್ನ ಹುಡುಕಾಡಿ, ಕೈಗೆ ಏನು ಸಿಗದೇ ಬರಿಗೈಯಲ್ಲಿ ವಾಪಸಾಗಿದ್ದಾರೆ. ರೌಡಿಶೀಟರಗಳಿಗೆ ಶಾಂತಿ ಸುವ್ಯವಸ್ಥೆ ಕದಡದಂತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.