ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟು ರಾತ್ರಿ ಗ್ರಾಮಸ್ಥರ ಪ್ರತಿಭಟನೆ…..!
ಸರ್ಕಾರಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟು ರಾತ್ರಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆಟವಾಡುತ್ತ ಕಾಲುವೆಯಲ್ಲಿ ಬಿದ್ದಿದ್ದ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮ ಶಿವು (4) ಮೃತಪಟ್ಟಿದ್ದ. ಮಗು ಸತ್ತಿದ್ದರು ಬದುಕಿದೆ ಎಂದು ಗಂಗಾವತಿಗೆ ರೆಫರ್ ಮಾಡಿದ್ದಾರೆಂದು ಡಾ.ಶಕುಂತಲಾ ಪಾಟೀಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗು ಸತ್ತು ಎರಡು ಗಂಟೆ ಕಳೆದಿದೆ ಎಂದು ತಿಳಿದ ಪೋಷಕರು ಕಾರಟಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ. ಸ್ಥಳಕ್ಕೆ ಕಾರಟಗಿ ಪೊಲೀಸರು ದೌಡು, ಪೊಲೀಸರು ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.