ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಜ್ಯ ರಾಜಕಾರಣ ಬದಲಾಗುತ್ತೆ – ದಿನೇಶ್ ಗುಂಡೂರಾವ್ ಭವಿಷ್ಯ
ಉಪಚುನಾವಣೆ ಬಳಿಕ ರಾಜ್ಯದಲ್ಲಿ ರಾಜ್ಯದ ರಾಜಕಾರಣ ಬದಲಾಗುತ್ತೆ ಎಂದು ಕೆ.ಆರ್.ಪೇಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಈ ಸರ್ಕಾರ ವಾಮಾಮಾರ್ಗದಿಂದ ಭ್ರಷ್ಟಾಚಾರದಿಂದ ಅನೈತಿಕವಾಗಿ,ಸಂವಿಧಾನ ಬಾಹಿರವಾಗಿ ರಚನೆಯಾಗಿರುವ ಸರ್ಕಾರ ಇದು. ಅದಕ್ಕಾಗಿ ಈ ಸರ್ಕಾರಕ್ಕೆ ಅಸ್ತಿತ್ವನೇ ಇಲ್ಲ,ದೃಡ ಸ್ಥಿರತೆನು ಇಲ್ಲ. ಚುನಾವಣೆ ಬಳಿಕ ರಾಜ್ಯದಲ್ಲೆ ಬೇರೆ ಡೆಲವಪ್ಮೆಂಟ್ ಆಗುತ್ತೆ. ಬೇರೆ ರೀತಿಯ ಒಂದು ತೀರ್ಮಾನಗಳು ಖಂಡಿತಾ ರಾಜ್ಯದಲ್ಲಿ ನಡೆಯುತ್ತೆ ಎಂದಿದ್ದಾರೆ.
ಜೆಡಿಎಸ್ ವರಿಷ್ಟರ ಬಿಎಸ್ವೈ ಸರ್ಕಾರ ಅಸ್ಥಿರವಾಗಲು ಬಿಡೋದಿಲ್ಲ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ಹೇಳಿಕೆಗಳು ಒಂದೊಂದು ಸಲ ಒಂದೊಂದು ರೀತಿ ಹೇಳಿಕೆ ಕೊಡ್ತಾರೆ. ಆಗಾಗಿ ನಾನು ಅದಕ್ಕೆ ಹೆಚ್ಚಿನ ಮಹತ್ವ ಕೊಡೋದಿಲ್ಲ. ಖಂಡಿತವಾಗಿ ನಮ್ಮ ಗುರಿ ಏನೆಂದ್ರೆ ಈ ಚುನಾವಣೆಯಲ್ಲಿ ಅತಿ ಹೆಚ್ಚು ಕ್ಷೇತ್ರ ನಾವು ಗೆಲ್ಲಬೇಕು. ಭಾಜಪ ಒಂದು ಸೀಟ್ ಕೂಡ ಗೆಲ್ಲಬಾರದು ಮತ್ತು ಇದಾದ್ಮೇಲೆ ರಾಜ್ಯದ ರಾಜಕಾರಣ ಶುದ್ದೀಕರಣ ಮಾಡುವ ಕಾಲ ಹತ್ತಿರ ಬರುತ್ತದೆ. ಅದನ್ನು ಮಾಡುವ ಅಗತ್ಯತೆ ಇದೆ, ಅದನ್ನ ಜನರಿಗೋಸ್ಕರ ಮಾಡುವ ಅಗತ್ಯತೆ ಇದೆ ಎಂದರು.