ಕೆ.ಆರ್.ಎಸ್. ಸುತ್ತಲಿನ ವ್ಯಾಪ್ತಿಯಲ್ಲಿ ಶಾಶ್ವತ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ…

ಕೆ.ಆರ್.ಎಸ್. ಸುತ್ತಲಿನ ೨೦ ಕಿ.ಮೀ ವ್ಯಾಪ್ತಿಯಲ್ಲಿ ಶಾಶ್ವತ ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಲಾಗಿದೆ. ಮಂಡ್ಯದ ವಕೀಲ ಸತ್ಯಾನಂದ ಎಂಬುವರಿಂದ ಡಿ.ಸಿ ಗೆ ಎಚ್ಚರಿಕೆ ಪತ್ರ ಬರೆಯಲಾಗಿದೆ.

ಕೆ.ಆರ್.ಎಸ್. ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಜಲಾಶಯಕ್ಕೆ ಸಾಕಷ್ಟು ಹಾನಿಯಾಗ್ತಿದೆ. ಗಣಿಗಾರಿಕೆ ಹೆಸ್ರಲ್ಲಿ ಸ್ಪೋಟಕ ಬಳಸಿ ಜಲಾಶಯದ ಭದ್ರತೆಗೆ ಮತ್ತು ಜೀವ ಪರಿಸರಕ್ಕೆ ಧಕ್ಕೆಯಾಗ್ತಿದೆ.

ಈಗ ಸದ್ಯ ತಾತ್ಕಾಲಿಕ ನಿಷೇಧಾಜ್ಞೆ ಇದ್ದು ಇದನ್ನ ಶಾಶ್ವತ ನಿಷೇಧಾಜ್ಞೆ ಮಾಡುವಂತೆ ಪತ್ರ ಬರೆಯಲಾಗಿದೆ.

ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಹೇರಲಾಗಿದೆ. ಇಲ್ದಿದ್ರೆ ಟಾಸ್ಕ್ ಫೋರ್ಸ್ ಸಮಿತಿ ಸೇರಿದಂತೆ ಗಣಿಮಾಲೀಕರನ್ನು ಪ್ರತಿವಾದಿಯನ್ನಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನ ನೀಡಲಾಗಿದೆ.

ಮಂಡ್ಯದ ನೂತನ‌ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಗೆ ಎಚ್ಚರಿಕೆ ಪತ್ರ ಬರೆದಿರುವ ವಕೀಲರು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಎದೆಷ್ಟು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights