ಗೊಂದಲದ ಗೂಡಾದ ಕೋಟಿಲಿಂಗ ಕ್ಷೇತ್ರ : ಹಣ ಅಧಿಕಾರಕ್ಕಾಗಿ ಶುರುವಾಯ್ತಾ ಕಿತ್ತಾಟ?
ಕೋಲಾರದ ಕೋಟಿಲಿಂಗ ಕ್ಷೇತ್ರದಲ್ಲಿ ಹಿರಿಯ ಶ್ರೀ ಸಾಂಭವ ಶಿವಮೂರ್ತಿ ಸ್ವಾಮಿ ನಿಧನದ ನಂತರ ಹಣ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದೆ.
ಹೌದು… ಕೋಟಿಲಿಂಗ ದೇಗುಲ ಟ್ರಸ್ಟ್ ಕಾರ್ಯದರ್ಶಿ ಕೆವಿ ಕುಮಾರಿ ಟಿಕೆಟ್ ಕೌಂಟರ್ ನಲ್ಲಿದ್ದ ಕ್ಯಾಷಿಯರ್ ಕೈಯಿಂದ ಟಿಕೆಟ್ ಮಷಿನ್ ಕಿತ್ತು ಹೊರ ದೊಬ್ಬಿದ ದೃಶ್ಯ ಸದ್ಯ ವೈರಲ್ ಆಗಿದೆ. ಕ್ಯಾಷಿಯರ್ ಡ್ರಾಯರ್ ನಲ್ಲಿ ಕೈ ಹಾಕಿ ಹಣ ಎತ್ತುಕೊಂಡ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕೋಲಾರ ಜಿಲ್ಲೆಯ ಕೆಜಿಎಪ್ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿರೊ ಕೋಟಿಲಿಂಗ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ದೇಗುಲ ಅಧಿಕಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಧರ್ಮಾಧಿಕಾರಿ ಶಿವಪ್ರಸಾದ್, ಕಾರ್ಯದರ್ಶಿ ಕುಮಾರಿಗೆ ಕೆಜಿಎಪ್ ತಹಶಿಲ್ದಾರ್ ರಮೇಶ್ ೩ ದಿನಗಳ ಹಿಂದಷ್ಟೆ ನ್ಯಾಯಾಂಗ ಹೋರಾಟ ನಂತರ ದೇಗುಲ ಆಡಳಿತವನ್ನ ಜಂಟಿಯಾಗಿ ನಿರ್ವಹಣೆ ಮಾಡಿ ಎಂದು ಅಧಿಕಾರ ಹಸ್ತಾಂತರ ಮಾಡಿದ್ದರು.
ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲೆ ದೇಗುಲ ಸಿಬ್ಬಂದಿ ಮೇಲೆ ಕಾರ್ಯದರ್ಶಿ ಕುಮಾರಿ ದೌರ್ಜನ್ಯವೆಸಗಿದ್ದಾರೆ. ದೌರ್ಜನ್ಯದಿಂದ ಟಿಕೆಟ್ ಕೌಂಟರ್ ನಿಂದ ಕ್ಯಾಷಿಯರ್ ನನ್ನ ಹೊರಗೆ ಕಳಿಸಿದ ವಿಡಿಯೊ ವೈರಲ್ ಆಗಿದೆ. ಕಾರ್ಯದರ್ಶಿ ಕುಮಾರಿ ವರ್ತನೆಗೆ ಭಾರೀ ಖಂಡನೆ ವ್ಯಕ್ತವಾಗಿದೆ.
ಸದ್ಯ ದೇಗುಲದಲ್ಲಿ ದಬ್ಬಾಳಿಕೆ ನಡೆಯುತ್ತಿದೆ ಅಧಿಕಾರ ನಡೆಸಲು ಬಿಡ್ತಿಲ್ಲ ಎಂದು ಧರ್ಮಾಧಿಕಾರಿ ಶಿವಪ್ರಸಾದ್ ಹೋರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಕೋಲಾರದ ಕೋಟಿಲಿಂಗ ಕ್ಷೇತ್ರ ಹಿರಿಯ ಶ್ರೀ ಸಾಂಭವ ಶಿವಮೂರ್ತಿ ಸ್ವಾಮಿ ನಿಧನದ ನಂತರ ಕೋಟಿಲಿಂಗ ಕ್ಷೇತ್ರ ಗೊಂದಲ ಗೂಡಾಗಿ ಹೋಗಿದೆ.