ದೆವ್ವ ಬಿಡಿಸುವ ನೆಪ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಸ್ವಾಮಿ….!
ಕೋಲಾರ ತಾಲೂಕಿನ ಅಬ್ಬಣಿ ಗ್ರಾಮದಲ್ಲೊಬ್ಬ ಕಳ್ಳ ಸ್ವಾಮಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ.
ಹೌದು… ಅಬ್ಬಣಿ ಗ್ರಾಮದಲ್ಲಿರುವ ಕಾಳಿಕಾಂಬ ದೇವಾಲಯದ ಚನ್ನ ಮಲ್ಲಿಕಾರ್ಜುನ ಸ್ವಾಮೀಜಿ, ದೆವ್ವ ಬಿಡಿಸುತ್ತೇನೆ ಎಂದು ಚಾಟಿ ಏಟು ಕೊಡುತ್ತಾನೆ. ದೆವ್ವ ಬಿಡಿಸುವ ಮಲ್ಲಿಕಾರ್ಜುನ ಸ್ವಾಮೀಜಿ ವಿಡಿಯೋ ವೈರಲ್ ಆಗಿದೆ. ದೆವ್ವ ಬಿಡಿಸುವುದು ಸೇರಿದಂತೆ ಮಾಠ ಮಂತ್ರ ಮಾಡುವ ಸ್ವಾಮೀಜಿ, ಗಂಡನೊಂದಿಗೆ ಕೆಲವು ದಿನಗಳ ಕಾಲ ದೂರವಿದ್ದರೆ ಒಳಿತೇನ್ನುತ್ತಾನೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ. ಈತನ ವಿರುದ್ಧ ಗ್ರಾಮಸ್ಥರು ಸಿಡಿಬಿದಿದ್ದಾರೆ.