ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಗಲಾಟೆ….

ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಗಲಾಟೆಯಾದ ಘಟನೆ ವಿಜಯಪುರ ನಗರದ ಆಶ್ರಮ ಬಳಿಯ ಪಾರೆಖ ನಗರದಲ್ಲಿ ನಡೆದ ಘಟನೆ ನಡೆದಿದೆ.

ಪುಂಡಾಟ‌ದಿಂದ ಕೈಯಲ್ಲಿ ದೊಣ್ಣೆ ತಲವಾರ್ ಹಿಡಿದು ಯುವಕರ ಪುಂಡಾಟವಾಡಿದ್ದಾರೆ. ವ್ಯಕ್ತಿಯೋರ್ವನ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ. ಯುವಕರ ಪುಂಡಾಟ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹುಡುಗರ ನಡುವಿನ ಜಗಳ ಬಿಡಿಸಲು ಬಂದ ರಮೇಶ ಮೇತ್ರಿ (35) ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಇನ್ನೋರ್ವ ಅಪ್ರಾಪ್ತ ಬಾಲಕನ ಮೇಲೂ ಹಲ್ಲೆ ಮಾಡಲಾಗಿದೆ.

ಎರಡು ಬೈಕ್ ಮೇಲೆ ದೊಣ್ಣೆ, ತಲವಾರ್ ಜೊತೆಗೆ ಬಂದ‌ ಯುವಕರಿಂದ ಕೃತ್ಯ ಎಸಗಲಾಗಿದ್ದು, ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ನಗರದ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights