ನೆರೆ ಪರಹಾರಕ್ಕೆ ಯಾರ ಇಪ್ಲೂಯೇನ್ಸ್ ಬೇಕಾಗಿಲ್ಲ – ಸಿಎಂ ಬಿಎಸ್‌ವೈ

ನೆರೆ ಪರಹಾರಕ್ಕೆ ಯಾರ ಇಪ್ಲೂಯೇನ್ಸ್ ಬೇಕಾಗಿಲ್ಲ. ಯಾವ ಪಕ್ಷದವರು ಗೊಂದಲ ಉಂಟುಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಬಿಎಸ್‌ವೈ ಕಟೂವಾಗಿ ಹೇಳಿದ್ದಾರೆ.

ಹೌದು.. ರಾಜ್ಯದ ನೆರೆ ಪರಿಹಾರದಲ್ಲಿ ಮೋದಿ ಮೌನ ವಿಚಾರಕ್ಕೆ ಸಿಎಂ ಬಿಎಸ್‌ವೈ ಪ್ರತಿಕ್ರಿಯಿಸಿ, ಇಲ್ಲಿಯವರೆಗು ದೇಶದ ಯಾವ ರಾಜ್ಯಕ್ಕು ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ. ಮೋದಿಯವರು ಈಗಷ್ಟೆ ದೇಶಕ್ಕೆ ವಾಪಸ್ಸಾಗಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ಪರಿಹಾರ ಘೋಷಣೆಯಾಗುವ ಭರವಸೆ ಇದೆ. ಯಾವ ಪಕ್ಷದವರು ಗೊಂದಲ ಉಂಟು ಮಾಡುವ ಅಗತ್ಯವಿಲ್ಲ. ಯಾರು ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಬುದ್ದಿವಂತರಾಗಿದ್ದು ಅವರಿಗೆ ಎಲ್ಲ ರಾಜ್ಯದ ಪರಿಸ್ಥಿತಿ ಗೊತ್ತಿದೆ. ಶೀಘ್ರದಲ್ಲಿ ಪರಿಹಾರ ಘೋಷಣೆ ಮಾಡ್ತಾರೆ ಎಂದರು.

ಇದೇ ವೇಳೆ ಬಂಡಿಪುರ ರಾತ್ರಿ ಸಂಚಾರ ವಿಚಾರ ಮಾತನಾಡಿ ನಾನು ಕೋರ್ಟ್ ಮೀರಿ ನಡೆಯೋಕಾಗೋಲ್ಲ. ಈಗಾಗಲೇ ಕೋರ್ಟ್ ರಾತ್ರಿ ಸಂಚಾರ ಬೇಡ ಅಂದಿದ್ದೆ. ಹಾಗಾಗಿ ಕೋರ್ಟ್ ಆದೇಶ ರಾಹುಲ್‌ಗಾಂಧಿಯವರಿಗೆ ಗೊತ್ತಿದೆ ಅಂದುಕೊಳ್ಳುತ್ತೇನೆ. ಬಂಡಿಪುರ ರಾತ್ರಿ ಸಂಚಾರ ನಿಷೇಧ ಮುಂದುವರೆಲಿದೆ ಎಂದ ಸಿಎಂ ಬಿಎಸ್‌ವೈ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights