ನೆರೆ ಸಂತ್ರಸ್ಥರ ಪರಿಹಾರ ತಾರತಮ್ಯ ಕಂಡು ಬಂದ್ರೆ ಅಧಿಕಾರಿಗಳಿಗೆ ಸಸ್ಪೆಂಡ್…!
ನೆರೆ ಸಂತ್ರಸ್ಥರ ಪರಿಹಾರ ತಾರತಮ್ಯ ಕಂಡು ಬಂದ್ರೆ ಅಧಿಕಾರಿಗಳಿಗೆ ಸಸ್ಪೆಂಡ್ ಗೆ ಡಿಸಿಎಂ ಕಾರಜೋಳ ಖಡಕ್ ಸೂಚನೆ ನೀಡಿದ್ದಾರೆ.
ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದಲ್ಲಿ ಸಿಇಓ ಗೆ ಡಿಸಿಎಂ ಗೋವಿಂದ ಕಾರಜೋಳ ಖಡಕ್ ಸೂಚನೆ ನೀಡಿದ್ದಾರೆ. ಆಯುಷ್ಮಾನ್ ಭಾರತ ಆರೋಗ್ಯ ಕನಾ೯ಟಕ ಸಂಬಂಧ ಜಾಗೃತಿ ಜಾಥಾಕ್ಕೆ ಬಂದಿದ್ದ ಡಿಸಿಎಂ, ಈ ವೇಳೆ ನೆರೆ ಸಂತ್ರಸ್ಥರ ಪರಿಹಾರ ತಾರತಮ್ಯ ವಿಚಾರವನ್ನು ಮುಖಂಡರು ಡಿಸಿಎಂ ಗಮನಕ್ಕೆ ತಂದಿದ್ದಾರೆ.
ಪರಿಹಾರ ತಾರತಮ್ಯ ಆಗಿರೋ ಪ್ರದೇಶಗಳಲ್ಲಿನ ಮಾಹಿತಿ ನೀಡಿದ ಮುಖಂಡರು, ಮನೆ ಹಾನಿಯಾಗದವರಿಗೂ ಪರಿಹಾರ ಕೊಡ್ತಿದ್ದಾರೆ,ನಿಜವಾದ ಫಲಾನುಭವಿಗಳಿಗೆ ಪರಿಹಾರ ಸಿಗುತ್ತಿಲ್ಲವೆಂದರು. ಹಲವು ಗ್ರಾಮಗಳ ಮುಖಂಡರ ಮನವಿ ಮೇರೆಗೆ ಸಿಇಓಗೆ ಖಡಕ್ ಸೂಚನೆ ನೀಡಿದ ಡಿಸಿಎಂ ಕಾರಜೋಳ ತಪ್ಪಿತಸ್ಥ ಅಧಿಕಾರಿಗಳ ಸಸ್ಪೆಂಡ್ -ಸಿಇಓ ಮಹ್ಮದ ಇಕ್ರಿಂಗೆ ಡಿಸಿಎಂ ಸೂಚನೆ ನೀಡಿದ್ದಾರೆ.
ಸಮರ್ಪಕ ಕಾಯ೯ ನಿವ೯ಹಿಸದ ಅಧಿಕಾರಿಗಳ ಸಸ್ಪೆಂಡ್ ಗೆ ಡಿಸಿಎಂ ಕಾರಜೋಳ ಖಡಕ್ ವಾರ್ನಿಂಗ್ ಕೊಟ್ಟು ನೆರೆ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.