ಪಾಗಲ್ ಪ್ರೇಮಿಗೆ ಬುದ್ದಿ ಕಲಿಸಲು ಹೋಗಿ ಕೊಲೆ ಮಾಡಿದ ಯುವತಿಯ ಸಹೋದರ…!

ಪ್ರೀತ್ಸೆ ಅಂತ ಫೋನ್ ಮೂಲಕ ಪ್ರಾಣ ತಿನ್ನುತ್ತಿದ್ದ ಪಾಗಲ್ ಪ್ರೇಮಿಗೆ ಬುದ್ದಿ ಕಲಿಸಲು ಹೋಗಿ ಯುವತಿ ಸಹೋದರ ಪಾಗಲ್ ಪ್ರೇಮಿ ಕೊಲೆ ಮಾಡಿರೋ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ..

ಬಾಗಲಕೋಟೆ ಜಿಲ್ಲೆಯ ಸುನಗ ಗ್ರಾಮದ ಕ್ರಾಸ್ನಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಸುನಗ ಗ್ರಾಮದ ೨೨ವರ್ಷದ ನಬಿಸಾಬ್ ತಹಸೀಲ್ದಾರ ಕೊಲೆಯಾದ ಯುವಕನಾಗಿದ್ದು.ವಿಠ್ಠಲನ ಸಹೋದರಿಗೆ ಮೇಲಿಂದ ಮೇಲೆ ಫೋನ್ ಮಾಡಿ ನಬಿಸಾಬ ಕಿರುಕಳ ನೀಡ್ತಿದ್ನಂತೆ. ಸಹೋದರಿಗೆ ಫೋನ್ ಮಾಡಬೇಡ ಅಂತ ವಿಠ್ಠಲ ನಬಿಸಾಬನಿಗೆ ಒಮ್ಮೆ ಎಚ್ಚರಿಕೆ ಸಹ ನೀಡಿದ್ದ.ಎಚ್ಚರಿಕೆ ನೀಡಿದ್ದರೂ ನಬೀಸಾಬ ನಿನ್ನೆಯೂ ವಿಠ್ಠಲನ ಸಹೋದರಿಗೆ ಫೋನ್ ಮಾಡಿ ಕಿರುಕಳ ನೀಡಿದ್ದಾನೆ.

ಆಗ ವಿಠ್ಠಲ ಹಾಗೂ ವಿಠ್ಠಲನ ಸ್ನೇಹಿತ ಮಂಜುನಾಥ ಸೇರಿ, ನಬಿಸಾಬ್ ನನ್ನು ನಿನ್ನೆ ರಾತ್ರಿ ಸುನಗಾ ಕ್ರಾಸ್ ಬಳಿ ಬೈಕ್ ಮೇಲೆ ಕರೆದೊಯ್ದು ಬಡಿಗೆ, ಕೋಲಿನಿಂದ ಹೊಡೆದು ಬುದ್ದಿ ಕಲಿಸಲು ಮುಂದಾಗಿದ್ದಾರೆ..ಆದ್ರೆ ನಬಿಸಾಬನಿಗೆ ಬೆನ್ನಿಗೆ,ಮೈಕಾಲಿಗೆ ,ತಲೆಗೆ ಮಾರಣಾಂತಿಕ ಹಲ್ಲೆಯಾಗಿವೆ.

ಬಳಿಕ ನಬಿಸಾಬನನ್ನು ಆತನ ಮನೆ ಬಳಿ ತಂದು ಬಿಟ್ಟಿದ್ದಾರೆ.ಆದ್ರೆ ಬಲವಾಗಿ ಗಾಯವಾಗಿದ್ರಿಂದ ನಬಿಸಾಬನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳಾದ ವಿಠ್ಠಲ, ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights