ಪಿಎಸ್ ಐ ವರ್ಗಾವಣೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಪ್ಲೆಕ್ಸ್ ಹಾಕಿದ ಸ್ಥಳೀಯರು…

ಪಿಎಸ್ ಐ ವರ್ಗಾವಣೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಪ್ಲೆಕ್ಸ್ ಹಾಕಿದ್ದಾರೆ ಸ್ಥಳೀಯರು.

ಏನಿದು? ಜನರ ರಕ್ಷಣೆಗೆಂದು ಇರುವ ಪಿಎಸ್ ಐ ವರ್ಗಾವಣೆಯಾದರೆ ಜನರಿಗೆ ಸಂತೋಷನಾ ಅಂತ ಹುಬ್ಬೇರಿಸಬೇಡಿ. ಇದು ನಿಜಾನೇ… ಯಾಕೆಂದ್ರೆ ಜನರ ರಕ್ಷಣೆಗಾಗಿ ಇರವಂತವರೆ ಮಾರಕವಾಗಿ ಹೋಗ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ.

ಹೌದು…  ಬಡವರ ನೈಟ್ ಕ್ಯಾಂಟೀನ್ ಗೆ ದುಸ್ವಪ್ನವಾಗಿದ್ದ ದಂಧೆಕೋರರ ವರವಾಗಿದ್ದ ಪಿಎಸ್ಐ ವರ್ಗಾವಣೆಗೆ ಜನತೆ ನಿಟ್ಟುಸಿರು ಎಂದು ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಜನ ಚನ್ನರಾಯಪಟ್ಟಣ ಟೌನ್ ಪಿಎಸ್ಐ ಆಗಿದ್ದ ಮಂಜುನಾಥ್ ವರ್ಗಾವಣೆಗೆ ಸ್ಥಳೀಯರ ಹರ್ಷ ವ್ಯಕ್ತಪಡಿಸಿದ್ದಾರೆ.

ರಸ್ತೆ ಬದಿ ಆಹಾರ ಮಾರಾಟಗಾರರು ಚನ್ನರಾಯಪಟ್ಟಣದಲ್ಲಿ 50 ಕ್ಕೂ ಹೆಚ್ಚು ಕಡೆ ಫ್ಲೆಕ್ಸ್ ಹಾಕಿ ಹರ್ಷ ವ್ಯಕ್ತಪಡಿಸಿದ್ದಾರೆ.  ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿ ಸುದ್ದಿ ಆಗಿದ್ದ ಪಿಎಸ್ಐ ಮಂಜುನಾಥ್ ವಿರುದ್ಧ ಹಲವಾರು ಬಾರಿ ಸ್ಥಳೀಯರು ದೂರು ನೀಡಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights