ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿವಾದಿತ ಹೇಳಿಕೆ…

ಎಲೆಕ್ಷನ್ ವೇಳೆ ಪ್ರಚಾರ ಮಾಡ್ತೀವಿ ನೋಟು ಕೊಡ್ತೀವಿ, ಓಟು ಹಾಕಿಸಿಕೊಳ್ತೀವಿ ಎಂದು ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ.

ಹೌದು… ಹೊಸಕೋಟೆ ಇಟ್ಟಸಂದ್ರ ಗ್ರಾಮದಲ್ಲಿ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಈ ಹೇಳಿಕೆಯನ್ನು ನೀಡಿದ್ದು ಭಾರೀ ವಿವಾದವನ್ನೇ ಸೃಷ್ಟಿ ಮಾಡಿದೆ.

ಎಲೆಕ್ಷನ್ ವೇಳೆ ಪ್ರಚಾರ ಮಾಡ್ತೀವಿ ನೋಟು ಕೊಡ್ತೀವಿ, ಓಟು ಹಾಕಿಸಿಕೊಳ್ತೀವಿ. ಕೆಲವ್ರು ಮನಸ್ಪೂರ್ತಿಯಿಂದ ಓಟು ಹಾಕ್ತಾರೆ ಕೆಲವ್ರು ಬೈದುಕೊಂಡು ಓಟು ಹಾಕ್ತಾರೆ. 40 ರೂಗೆ ಸಂಬಳ ಪಡೆದು ಕೆಲಸ ಮಾಡಿದ್ದೆ ನಾನು. ನನ್ನ ಸಾವಿರ ಕೋಟಿ ಆಸ್ತಿ ಬಗ್ಗೆ ಮಾಧ್ಯಮಗಳು ಪ್ರಚಾರ ಮಾಡ್ತಿದೆ. ಕಷ್ಟ ಪಟ್ಟು ಹಣ ಸಂಪಾದಿಸಿದ್ದೇನೆ ಯಾವುದೇ ಅಕ್ರಮ ಮಾಡಿಲ್ಲ. ಸರ್ಕಾರಕ್ಕೆ ತೆರಿಗೆ ಕಟ್ಟಿ ನಾನು ಆಸ್ತಿ ಮಾಡಿದ್ದೇನೆ, ಯಾವುದೇ ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಎಂದಿದ್ದಾರೆ.

ನರೇಂದ್ರ ಮೋದಿ ಅವ್ರು ಪ್ರಧಾನಿ ಆಗಿರ್ಲಿಲ್ಲ ಎಂದ್ರೆ ಇಷ್ಟೊತ್ತಿಗೆ ದೇಶದ ಮೇಲೆ ಬಾಂಬ್ ಹಾಕ್ತಿದ್ರು. ಪಕ್ಕದ ಶತ್ರು ದೇಶಗಳು ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕ್ತಿವೆ. ನರೇಂದ್ರ ಮೋದಿ ಬಹಳ ಧೈರ್ಯ ವಂತರು ಹಾಗಾಗಿ ಎಲ್ಲವನ್ನು ನಿಭಾಯ್ತಿದ್ದಾರೆ ಎಂಬ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights