ಬೆಳಗಿನ ಜಾವ ಅಬ್ಬರಿಸಿದ ಮಳೆ : ಮನೆಗೆ ನುಗ್ಗಿದ ನೀರು

ಬೆಳಗಿನ ಜಾವ ಅಬ್ಬರಿಸಿದ ಮಳೆಗೆ ಬಾಗಲಕೋಟೆ ಸೋಮಲಾಪೂರ ಗ್ರಾಮದಲ್ಲಿ ಐದಾರು ಮನೆಗೆ ನೀರು ನುಗ್ಗಿದ ಪರಿಣಾಮ ಮನೆಗಳು, ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿವೆ.

ಗ್ರಾಮದಲ್ಲಿ ಬೆಳಿಗ್ಗೆ ೫ ಗಂಟೆಯಿಂದ ಸತತವಾಗಿ ಮಳೆ ಸುರಿದಿದೆ. ಹಳ್ಳದಂತೆ ಹರಿದ ಮಳೆ ನೀರಿಗೆ ಸಿಲುಕಿದ ಸಾಮಾಗ್ರಿ ಹೊರ ತರಲು ಜನ ಹರಸಾಹಸ ಪಡಬೇಕಾಗಿದೆ.

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights