ಬೈಕ್ ಸಮೇತ ಕೆರೆಗೆ ಬಿದ್ದು ಬೈಕ್ ಸವಾರ ಸಾವು…!
ಬೈಕ್ ಸಮೇತ ಕೆರೆಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಐಕನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಐಕನಹಳ್ಳಿ ಗ್ರಾಮದ ಮುರುಳಿ(೩೮) ಮೃತ ದುರ್ದೈವಿ. ಗ್ರಾಮದ ಕೆರೆಯ ಏರಿ ಮೇಲೆ ರಾತ್ರಿ ಬೈಕ್ನಲ್ಲಿ ಬರುವಾಗ ಆಯತಪ್ಪಿ ಬೈಕ್ ಸಮೇತ ಸವಾರ ಕೆರೆಗೆ ಬಿದ್ದಿದ್ದಾನೆ. ಮೇಲೆ ಬರಲಾಗದೆ ಕೆರೆಯಲ್ಲಿ ಮುಳುಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.