ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದರೆ ಒಳ್ಳೇದು ಎಂದ ಶ್ರೀನಿವಾಸಗೌಡ
ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದರೆ ಒಳ್ಳೆದು ಎಂದು ಕೋಲಾರದಲ್ಲಿ ಜೆಡಿಎಸ್ ಹಿರಿಯ ಶಾಸಕ ಶ್ರೀನಿವಾಸಗೌಡ ಹೇಳಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಬೈ ಎಲೆಕ್ಷನ್ ನಲ್ಲಿ ಹೆಚ್ಚು ಸ್ತಾನ ಗಳಿಸಿದ್ರೆ ಮತ್ತೆ ಮೈತ್ರಿ ಸರ್ಕಾರ ರಚನೆ ಆಗುತ್ತೆ. 2018 ರ ಅಸೆಂಬ್ಲಿ ಎಲೆಕ್ಷನ್ ನಂತರ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡೊ ಯೋಚನೆ ಮಾಡಿಲ್ಲ. ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡುವ ಚಿಂತನೆ ನಡೆಸಿತ್ತು. ಅಷ್ಟೊತ್ತಿಗೆ ಕಾಂಗ್ರೆಸ್ ನಮ್ಮ ಬಳಿ ಬಂದಿತ್ತು.
ಬೈ ಎಲೆಕ್ಷನ್ ನಲ್ಲಿ ಕೈ ತೆನೆ ಹೆಚ್ಚು ಸ್ತಾನ ಗೆದ್ದಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ. ಕೈ ತೆನೆ ಮೈತ್ರಿ ಬಗ್ಗೆ ನಾನು ಇಂದೇ ಪಕ್ಷದ ವರಿಷ್ಠರ ಜೊತೆಗೆ ಮಾತನಾಡುವೆ ಎಂದು ಶ್ರೀನಿವಾಸಗೌಡ ಮೈತ್ರಿ ಆಸೆ ವ್ಯಕ್ತಪಡಿಸಿದ್ದಾರೆ.