ಮಕ್ಕಳ ಕಳ್ಳ ಸಾಗಾಣಿಕೆ ಪ್ರಕರಣ : ಸಾಂತ್ವನ ಕೇಂದ್ರದ ಮೇಲೆ ತಹಶೀಲ್ದಾರ್, ಪೊಲೀಸರ ದಾಳಿ…
ಜಮಖಂಡಿ ಸಾಂತ್ವನ ಕೇಂದ್ರದಿಂದ ಮಕ್ಕಳ ಕಳ್ಳ ಸಾಗಾಣಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂತ್ವನ ಕೇಂದ್ರದ ಮೇಲೆ ತಹಶೀಲ್ದಾರ್, ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.
ಹೌದು… ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿರೋ ಅಮ್ಮ ವೃದ್ಧಾಶ್ರಮ, ಹಾಗೂ ಸಾಂತ್ವನ ಕೇಂದ್ರದಲ್ಲಿನ ದಾಖಲೆಗಳ ಜಪ್ತಿ ಮಾಡಲಾಗಿದೆ.
ಶ್ರೀ ಹನುಮಾನ್ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿದ್ದ ಸಾಂತ್ವನ,ಹಾಗೂ ವೃದ್ಧಾಶ್ರಮದ ಮುಖ್ಯಸ್ಥೆ ರೇಖಾ ಕಾಂತಿ ಎಂಬುವರ ವಿರುದ್ಧ ಮಕ್ಕಳ ಕಳ್ಳ ಸಾಗಾಣಿಕೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.
ಬಾಲ್ಯ ವಿವಾಹ ತಡೆದು ೧೭ ವರ್ಷದ ಬಾಲಕಿ ಹೊರರಾಜ್ಯಕ್ಕೆ ಮಾರಾಟ ಮಾಡ್ತಿದ್ರು ಅನ್ನೋ ಆರೋಪ ಇದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ರೇಖಾ ಕಾಂತಿ ಸೇರಿದಂತೆ ಮೂವರು ವಿರುದ್ಧ ಮಕ್ಕಳ ಕಳ್ಳ ಸಾಗಾಣಿಕೆ ಆರೋಪಿಸಿ ಡಿಸಿಗೆ ಪತ್ರ ಬರೆಯಲಾಗಿತ್ತು.
ಜೊತೆಗೆ ನಿನ್ನೆ ರಾತ್ರಿ ಸಾಂತ್ವನ ಕೇಂದ್ರದಲ್ಲಿನ ದಾಖಲೆ ಜಪ್ತಿ ಮಾಡಲಾಗಿದೆ. ಪೊಲೀಸರು ಮತ್ತು ಜಮಖಂಡಿ ತಹಶೀಲ್ದಾರ್ ಎ ಜಿ ಮಹಾಂತ್ ನೇತೃತ್ವದಲ್ಲಿ ದಾಳಿ ಮಾಡಿ ದಾಖಲೆ ವಶಕ್ಕೆ ಪಡೆಯಲಾಗಿದ್ದು, ತಹಶೀಲ್ದಾರ್ ಗೆ ಪೊಲೀಸರು ಸಾಥ್ ನೀಡಿದ್ದಾರೆ.