ಮಗಳ ಮೃತಪಟ್ಟ ವಿಷಯವನ್ನೆ ಮುಚ್ಚಿಟ್ಟು ಕಂಡಕ್ಟರ್ ಕೆಲಸಕ್ಕೆ ಕಳುಹಿಸಿದ ಅಧಿಕಾರಿಗಳು…
ಮಾನವೀಯತೆ ಮರೆತ ಕೆ.ಎಸ್.ಆರ್. ಟಿ.ಸಿ. ಸಿಬ್ಬಂದಿಗಳು ಮಗಳ ಮೃತಪಟ್ಟ ವಿಷಯವನ್ನೆ ಮುಚ್ಚಿಟ್ಟು ಕಂಡಕ್ಟರ್ ಕೆಲಸಕ್ಕೆ ತಂದೆಯನ್ನು ಕಳುಹಿಸಿದ ಘಟನೆ ಕೊಪ್ಪಳದ ಗಂಗಾವತಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋದಲ್ಲಿ ನಡೆದಿದೆ.
ಗಂಗಾವತಿ ಟು ಕೊಲ್ಲಾಪುರ ಬಸ್ ಗೆ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಬುಧುವಾರ ಎಂದಿನಂತೆ ಕೆಲಸಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಕಂಡಕ್ಟರ್ ಮಂಜುನಾಥ್ ಮಗಳು 11 ವರ್ಷದ ಕವಿತಾ ಮೃತಪಟ್ಟಿದ್ದಾಳೆ. ಬಾಗಲಕೋಟೆ ತಾಲೂಕಿನ ರಾಂಪೂರದಲ್ಲಿ ಕವಿತಾ ಮೃತ ಪಟ್ಟಿದ್ದು, ಬುಧುವಾರ 10ಕ್ಕೆ ಗಂಗಾವತಿ ಬಸ್ ಡಿಪೋ ಗೆ ಫೊನ್ ಮಾಡಿ ಮಂಜುನಾಥ್ ಸಂಬಂಧಿಕರು ವಿಷಯ ತಿಳಿಸಿದ್ದಾರೆ.
ಮಂಜುನಾಥ್ ಮಗಳು ಮೃತಪಟ್ಟ ವಿಷಯ ತಿಳಿಸಿದರೂ ಮುಚ್ಚಿಟ್ಟು ಗಂಗಾವತಿ ಡಿಪೋ ಅಧಿಕಾರಿಗಳು ಮಂಜುನಾಥ್ ಅವರನ್ನು ಕೆಲಸಕ್ಕೆ ಕಳುಹಿಸಿದ್ದಾರೆ. ರಾತ್ರಿ ಮಗಳು ಸಾವನ್ನಪ್ಪಿದ ವಿಷಯ ತಿಳಿದ ಮಂಜುನಾಥ್ಗೆ ದಿಗ್ಭ್ರಮೆಯಾಗಿದ್ದಾರೆ. ಗುರುವಾರ ರಾತ್ರಿ ವಿಷಯ ತಿಳಿದು ಮರುದಿನ ಕೆಲಸಕ್ಕೆ ಹಾಜರಾಗುವಂತೆ ಡಿಪೋ ಅಧಿಕಾರಿಗಳು ಒತ್ತಡ ಹಾಕಿದ್ದಾರೆ.
ಈ ಬಗ್ಗೆ ಸಹೋದ್ಯೋಗಿ ಸಿಬ್ಬಂದಿ ಜೊತೆ ಅಳಲನ್ನು ಕಂಡಕ್ಟರ್ ಮಂಜುನಾಥ್ ತೊಡಿಕೊಂಡಿದ್ದರು. ಅಧಿಕಾರಿಗಳ ಅಮಾನವೀಯ ವರ್ತನೆ ಖಂಡಿಸಿ ಇಂದು ಗಂಗಾವತಿ ಡಿಪೊ ಎದುರು ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆ ಪ್ರತಿಭಟನೆಗೆ ಸಿದ್ಧತೆ ಇದೆ.