ಮನೆಮನೆಗೆ ಮಧ್ಯ ತಲುಪಿಸುವ ಸಚಿವ ನಾಗೇಶ್ ಯೋಜನೆಗೆ ಭಾರೀ ವಿರೋಧ…
ಮನೆಮನೆಗೆ ಮಧ್ಯ ತಲುಪಿಸುವ ಯೋಜನೆ ತರುವುದಾಗಿ ಅಬಕಾರಿ ಸಚಿವ ನಾಗೇಶ್ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಾದ್ಯಂತ ಈ ಹೊಸ ಯೋಜನೆಗೆ ಬಾರೀ ವಿರೋಧ ವ್ಯಕ್ತವಾಗಿದೆ.
ಎಲ್ಲಾ ಮಹಿಳೆಯರಿಂದ ಸರ್ಕಾರದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಯೋಜನೆಯನ್ನ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಈ ಯೋಜನೆಯಿಂದ ಮತ್ತಷ್ಟು ಸಂಸಾರ ಹೊರ ಬೀಳುತ್ತವೆ ಎಂದು ಕಿಡಿ ಕಾರಿದ್ದಾರೆ.
ಮನೆಗೆ ಮಧ್ಯ ತಲುಪುವುದರಿಂದ ಗಂಡಸರು ದುಡಿಮೆ ಮಾಡದೇ ಮನೆಯಲ್ಲೇ ಕುಡಿದು ಮಲಗುತ್ತಾರೆ. ಹೀಗಾದರೆ ಸಂಸಾರ ತೂಗುವುದು ಹೇಗೆ..? ಇದರಿಂದ ನೂರಾರು ಕುಟುಂಬಗಳು ಬೀದಿ ಪಾಲಾಗುತ್ತವೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಬಾರೀ ಪರಿಣಾಮ ಬೀರುತ್ತದೆ. ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.