ಮನೆಯ ಮೇಲ್ಚಾವಣೆ ಕುಸಿತ : ತಂದೆಯ ಎದುರೇ ಪ್ರಾಣಬಿಟ್ಟ ಮೂರು ಜನ ಮಕ್ಕಳು…!

ಮನೆಯ ಮೇಲ್ಚಾವಣೆ ಕುಸಿದು ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.

ಹೌದು…  ಸುಜಾತ(22), ಅಮರೇಶ(18), ಗವಿಸಿದ್ದಪ್ಪ(15) ತಂದೆಯ ಎದುರೆ ಪ್ರಾಣಬಿಟ್ಟ ದುರ್ದೈವಿಗಳು. ಮನೆಯ ಮೇಲ್ಚಾವಣೆ ಕುಸಿದ ಪರಿಣಾಮ ಮೂರು ಜನ ಮಕ್ಕಳನ್ನು ಕಳೆದುಕೊಂಡು ಒಂಟಿಯಾದ ತಂದೆ ಸೋಮಣ್ಣ ಕುದುರಿಮೋತಿ ಸಾವಿನದವಡೆಯಿಂದ ಪಾರಾಗಿದ್ದಾರೆ.

ಗ್ರಾಮದಲ್ಲಿ ನೀರವಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights