ಮಲೆನಾಡಲ್ಲಿ ಮನುಷ್ಯತ್ವ ಮರೆತ ಜನ : ವಯೋವೃದ್ಧೆಯ ಸರ ಕಸಿದು ಪರಾರಿ
ಮಳೆಯಿಂದ ಮಲೆನಾಡೇ ಜಲಾವೃತಗೊಂಡು ಜನ ಬೀದಿ ಪಾಲಾಗಿದ್ದಾರೆ. ಇರಲು ಮನೆ, ತಿನ್ನಲು ಆಹಾರವಿಲ್ಲದೆ ಬದುಕು ಸಾಗಿಸುತ್ತಿರುವಾಗ ನಿರ್ದಹಿಗಳು ನಿರ್ಗತಿಕ ಮಹಿಳೆಯ ಸರ ಕಿತ್ಕೊಂಡಿದ್ದಾರೆ.
ಹೌದು… ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಮಣ್ಣಿಕೆರೆಯಲ್ಲಿ ಈ ಘಟನೆ ನಡೆದಿದ್ದು, ಮೀನಾಕ್ಷಿ (65) ಎಂಬುವವರು ಸರ ಕಳೆದುಕೊಂಡ ಮಹಿಳೆ. ಮನೆ ಮುಂದೆಯೇ ಸರ ಕಸಿದು ಪರಾರಿಯಾಗಿದ್ದಾರೆ ಕಳ್ಳರು.
ತುತ್ತು ಅನ್ನಕ್ಕಾಗಿ ಕಂಗಾಲಾಗಿದ್ದ ವಯೋವೃದ್ಧೆಯ ಸರ ಕಸಿದು ದುರುಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಭೇಟಿ, ಪರಿಶೀಲನೆ ನಡೆಸುತ್ತಿದ್ದು, ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.