ಮಲೆನಾಡಲ್ಲಿ ಮುಂದುವರೆದ ಮಳೆ ರೌದ್ರನರ್ತನ : ಜನಜೀವನ ಅಸ್ತವ್ಯಸ್ತ
ಮಲೆನಾಡಲ್ಲಿ ಮಳೆ ರೌದ್ರನರ್ತನ ಮುಂದುವರೆದಿದೆ. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂಡಿಗೆರೆಯ ಬಣಕಲ್, ಕೊಟ್ಟಿಗೆಹಾರ, ಜಾವಳಿ, ದುರ್ಗದಹಳ್ಳಿ ಸುತ್ತಾಮುತ್ತ ಭಾರೀ ಮಳೆ ಉಂಟಾಗಿದೆ.
ಮಲೆನಾಡಿನ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಮಲೆನಾಡಿಗರಲ್ಲಿ ಆತಂಕ ಹೆಚ್ಚಿದೆ. ಮಳೆಯಿಂದಾಗಿ ಮನೆಯಿಂದ ಹೊರಬರೋಕು ಮಲೆನಾಡಿನ ಜನಕ್ಕೆ ಆಗುತ್ತಿಲ್ಲ. ಮಳೆಯ ರೌದ್ರನರ್ತನಕ್ಕೆ ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ. ಮಳೆಯ ರ್ಭಟ ಸದ್ಯ ಕ್ಯಾಮರಾದಲ್ಲಿ ಸೆರೆಯಾಗಿವೆ ನೋಡಿ.