ಮಳೆಯಿಂದ ರಸ್ತೆಗಳು ಹಾಳು : ಸಂಚಾರಿ ಪೊಲೀಸರಿಂದ ಗುಂಡಿ ಮುಚ್ಚುವ ಕಾರ್ಯ

ಮಳೆ… ನೀರು… ಮಳೆ.. ನೀರು… ಕಳೆದ 15-20 ದಿನದಿಂದ ಇದೇ ಸುದ್ದಿ. ಹೌದು… ಈ ಬಾರಿ ಮಳೆ ಮಾಡಿದ ಅವಾಂತರದಿಂದ ಜನ ರೋಸಿ ಹೋಗಿದ್ದಾರೆ. ಜನ ಸಾಮಾನ್ಯರ ಗೋಳು ಕೇಳೋರೇ ಇಲ್ಲದಂತಾಗಿದೆ. ಭಾರೀ ಮಳೆಗೆ ಕೆಲ ಭಾಗಗಳಲ್ಲಿ ನೀರು ತುಂಬಿಕೊಂಡರೆ ಇನ್ನೂ ಕೆಲ ಭಾಗಗಳಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ರಸ್ತೆ ಸಂಚಾರಕ್ಕೆ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಕೆಎಲ್ಇ ಆಸ್ಪತ್ರೆಯಿಂದ ಎನ್ ಎಚ್ ೪ ಕ್ಕೆ ಸೇರುವ ರಸ್ತೆ ಸಂಪೂರ್ಣ ಹಾಳಾಗಿ ಹೋಗಿವೆ.

ಇದರಿಂದಾಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಂಚಾರಕ್ಕೆ ಅಡ್ಡಿ ಉಂಟುಮಾಡಿದ ಗುಂಡಿಗಳನ್ನು ಮುಚ್ಚುವಂತ ಕಾರ್ಯವನ್ನು ಟ್ರಾಫಿಕ್ ಪೊಲೀಸರು ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕೆಎಲ್ಇ ಆಸ್ಪತ್ರೆಯಿಂದ ಎನ್ ಎಚ್ ೪ ಕ್ಕೆ ಸೇರುವ ರಸ್ತೆ ಸಂಪೂರ್ಣ ಹಾಳಾಗಿತ್ತು. ಉತ್ತರ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಪಿ.ಎಸ್ ಕೋಲ್ಕಾರ್, ಹವಾಲ್ದಾರ್ ಎಸ್ ವಿ ಹಾದಿಮನಿ, ಪಿ ಬಿ ನಾಯಕ್ ಗುಂಡಿ ಮುಚ್ಚಿದ ಸಿಬ್ಬಂಧಿಗಳು

ರಸ್ತೆ ದುರಸ್ತಿ, ಅಪಾಯಕಾರಿ ಗುಂಡಿ ಮುಚ್ಚಲು ಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ ಎಂದು  ಪಾಲಿಕೆ ಅಧಿಕಾರಿಗಳ‌ ವಿರುದ್ಧ ಸಾರ್ವಜನಿಕರ ಹಿಡಿ ಶಾಪ ಹಾಕುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights