‘ಮೈತ್ರಿ ಸರ್ಕಾರ ಪತನ ಮಾಡುವಂತ ನೀಚ ರಾಜಕಾರಣ ನನ್ನದಲ್ಲ. ಅದೇನಿದ್ರು ದೇವೇಗೌಡ, ಮಕ್ಕಳ ಹುಟ್ಟುಗುಣ’

ಮೈತ್ರಿ ಸರ್ಕಾರ ಪತನ ಮಾಡುವಂತ ನೀಚ ರಾಜಕಾರಣ ನನ್ನದಲ್ಲ. ಅದೇನಿದ್ರು ದೇವೇಗೌಡ ಹಾಗೂ ಮಕ್ಕಳ ಹುಟ್ಟುಗುಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್.ಡಿ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನ ಮಾಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ  ಸಿಎಂ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಪತನಕ್ಕೆ ದಳಪತಿಗಳೇ ಕಾರಣ ನಾನಲ್ಲ. ನಮ್ಮ ಪಕ್ಷವಲ್ಲ. ನನ್ನ ಮೇಲೆ ಆರೋಪ ದಾಖಲೆ ರಹಿತವಾಗಿವೆ. ಸುಳ್ಳು ಆರೋಪ ಮಾಡಲಾಗುತ್ತಿದೆ. ಈವರೆಗೂ ಈ ವಿಚಾರವಾಗಿ ನಾನು ಮಾತನಾಡಿರಲಿಲ್ಲ. ಆದರೆ ಮಾತನಾಡದೇ ಹೋದರೆ ಜನ ನನ್ನ ಬಗ್ಗೆ ತಪ್ಪಿ ತಿಳಿದುಕೊಳ್ಳುತ್ತಾರೆ.

ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಬರಲಿ ಮೈತ್ರಿ ಸರ್ಕಾರ ಪತನ ಮಾಡುವಷ್ಟು ನೀಚ ರಾಜಕಾರಣ ನಾನು ಮಾಡಿಲ್ಲ. ಅದೇನಿದ್ರು ದೇವೇಗೌಡ ಹಾಗೂ ಅವರ ಮಕ್ಕಳ ಹುಟ್ಟುಗುಣ ಎಂದಿದ್ದಾರೆ.

5-6 ಬಾರಿ ಸಮಸ್ವಯ ಸಮಿತಿ ಸಭೆ ಮಾಡಲಾಗಿತ್ತು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕುಮಾರಸ್ವಾಮಿಯವರು ಪ್ರಸ್ತಾಪ ಮಾಡಿಲ್ಲ. ಸಯಲ್ಲಿ ಒಪ್ಪಿಕೊಳ್ತಾಯಿದ್ರು ಆದ್ರೆ ಕುಮಾರಸ್ವಾಮಿ ಅದನ್ನ ಜಾರಿ ಮಾಡುತ್ತಿರಲಿಲ್ಲ. ಇದನ್ನ ನಾನು ಎಲ್ಲಿಯೂ ಹೇಳಿಲ್ಲ. ಸಮನ್ವಯ ಸಮಿತಿಗೆ ಕುಮಾರಸ್ವಾಮಿಯವರು ಬೆಲೆ ಕೊಡಲಿಲ್ಲ.

ಹೀಗಾಗಿ ಕುಮಾರಸ್ವಾಮಿಯವರ  ಆಡಳಿತ ವೈಖರಿಯಿಂದ ಸರ್ಕಾರ ಪತನವಾಗಿದೆ. ನಾನ್ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ನಮ್ಮ ಪಕ್ಷ ಕೂಡ ಸರ್ಕಾರದಲ್ಲಿ ಭಾಗಿಯಾಗಿತ್ತು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights