ಮೈನರ್ ಆಪರೇಷನ್ ಗೆ ದುಪ್ಪಟ್ಟು ಬಿಲ್ : ರೋಗಿ ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ
ಕಾಲಿನ ಮೈನರ್ ಆಪರೇಷನ್ ಗೆ 50 ಸಾವಿರ ಎಂದು ಹೇಳಿ 1.51 ಲಕ್ಷ ಬಿಲ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಆಸ್ಪತ್ರೆ ಮಾಲೀಕ ವೈದ್ಯ ರೋಗಿಯ ಸಂಭಂದಿಕರಿಗೆ ಬೆದರಿಕೆ ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹೇಮಾವತಿ ಆಸ್ಪತ್ರೆಗೆ ಅರಕಲಗೂಡು ಮೂಲದ ಮಂಜುನಾಥ್ ಎಂಬುವರು ಮರದಿಂದ ಬಿದ್ದು ಕಾಲಿನ ನೋವಾಗಿದ್ದು, ಆಪರೇಷನ್ ಗೆಂದು ದಾಖಲಾಗಿದ್ರು. ಆಪರೇಷನ್ ಖರ್ಚು 50 ಸಾವಿರವಾಗುತ್ತೆ ಎಂದು ದಾಖಲಿಸಿಕೊಂಡು 1ಲಕ್ಷದ 51 ಸಾವಿರ 400 ರೂ ಬಿಲ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಆಸ್ಪತ್ರೆ ಮಾಲೀಕರಾಗಿರುವ ವೈದ್ಯ ನಿಖಿಲ್ ರೋಗಿಯ ಸಂಭಂದಿಕರಿಗೆ ಬೆದರಿಕೆ ಹಾಕಿದ್ದಾರೆಂದು ರೋಗಿಯ ಸಂಭಂದಿಕರು ಆರೋಪಿಸಿದ್ದಾರೆ.
ಈ ವೇಳೆ ಆಸ್ಪತ್ರೆ ಮಾಲೀಕ ವೈದ್ಯ ಮತ್ತು ರೋಗಿಯ ನಡುವೆ ಮಾತಿನ ಚಕಮಕಿ ನಡೆಯಿತು. ಹಲವು ಬಾರಿ ಈ ಹೇಮಾವತಿ ಆಸ್ಪತ್ರೆ ಬಗ್ಗ ದೂರು ಕೇಳಿಬಂದ್ದು, ಬಡ ಜನ್ರ ರಕ್ತ ಹೀರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.