ಮೋದಿಗೆ ತಾಕತ್ತಿದ್ದರೆ ಭಾರತದಲ್ಲಿ ಬುದ್ದನ ದೇವಸ್ಥಾನ ಕಟ್ಟಲಿ – ಪ್ರೋ.ಕೆ.ಎಸ್.ಭಗವಾನ್
ಮೈಸೂರಿನಲ್ಲಿ ಮಹಿಷ ದಸರಾ ರದ್ದು ವಿಚಾರಕ್ಕೆ ಮಾತು ಆರಂಭಿಸಿದ ಪ್ರೋ.ಕೆ.ಎಸ್.ಭಗವಾನ್ ದೇಶದ ಪ್ರಧಾನಿಗೆ ತಾಕತ್ತಿನ ಪ್ರಶ್ನೆ ಹಾಕಿದ್ದಾರೆ. ಜೊತೆಗೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿನಿದ್ದಾರೆ.
ಹೌದು… ಮಹಿಷಾಸುರನನ್ನ ಸುಮ್ಮನೆ ರಾಕ್ಷಸ ಅಂತ ಬಿಂಬಿಸಿದ್ದಾರೆ. ಆತ ರಾಕ್ಷಸನಾಗಿದ್ದರೆ ಆತನ ಹೆಸರನ್ನ ಒಂದು ರಾಜ್ಯಕ್ಕೆ ಇಡುತ್ತಿದ್ದರಾ? ಜನರಿಗೆ ಇಡುತ್ತಿದ್ದರಾ? ನಿನ್ನೆ ಪ್ರಧಾನಿಗಳು ವಿಶ್ವಸಂಸ್ಥೆಯಲ್ಲಿ ನಾನು ಬುದ್ದನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಿದ್ದಾರೆ. ಅವರ್ಯಾಕೇ ರಾಮನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಿಲ್ಲ. ರಾಮನ ಬಗ್ಗೆ ವಿಶ್ವಸಂಸ್ಥೆಯಲ್ಲಿ ಯಾಕೇ ಮೋದಿ ಮಾತನಾಡಿಲ್ಲ ಎಂದು ಪ್ರಧಾನಿ ಮೋದಿಗೆ ಪ್ರೋ.ಕೆ.ಎಸ್.ಭಗವಾನ್ ಪ್ರಶ್ನೆ ಹಾಕಿದ್ದಾರೆ.
ಮೋದಿಗೆ ತಾಕತ್ತಿದ್ದರೆ ಭಾರತದಲ್ಲಿ ಬುದ್ದನ ದೇವಸ್ಥಾನ ಕಟ್ಟಲಿ. ಅದ್ಯಾಕೆ ರಾಮನ ದೇವಸ್ಥಾನ ಕಟ್ಟುತ್ತಿನ ಅಂತಾರೇ. ಮನುಸ್ಮೃತಿಯಲ್ಲಿ ಬ್ರಾಹ್ಮಣ ಸೇವೆ ಮಾಡೋರೋ ಗುಲಾಮರು ಅಂತ ಹೇಳಿದೆ. ನಿನ್ನೆ ಅಂತದ್ದೆ ಗುಲಾಮರು ವೇದಿಕೆ ಕಿತ್ತು ಹಾಕಿದ್ದಾರೆ ಎಂದು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸಂಸದ ಪ್ರತಾಪ್ಸಿಂಹರನ್ನ ಪ್ರೋ.ಕೆ.ಎಸ್.ಭಗವಾನ್ ಪರೋಕ್ಷವಾಗಿ ಗುಲಾಮ ಎಂದಿದ್ದಾರೆ.