ಲಾಂಗ್ ಹಿಡಿದು ಬೆದರಿಕೆ ಹಾಕಿದ ಗ್ರಾ.ಪಂ. ಸದಸ್ಯನ ಸಹೋದರ…!

ಸಾಮಾನ್ಯವಾಗಿ ಲಾಂಗು, ಮಚ್ಚು ರೌಡಿಗಳ ಕೈಯಲ್ಲಿರುತ್ತವೆ. ಆದರೆ ಜನ ಸೇವ ಮಾಡುವ ಸಂಬಂಧಿಕರ ಕೈಯಲ್ಲಿ ಲಾಂಗ್ ನೋಡಿ ಜನ ನಮ್ಮ ದೇಶ ಸ್ಥಿತಿ ಎಲ್ಲಿಗೆ ಬಂತು ಅಂತು ಯೋಚನೆ ಮಾಡುವಂತಾಗಿದೆ.

ಎಸ್…ಗ್ರಾಮ ಪಂಚಾಯತ ಸದಸ್ಯನ ಸಹೋದರ ಲಾಂಗ್ ಹಿಡಿದು ಬೆದರಿಕೆ ಹಾಕಿದ ವಿಡಿಯೋ ಸದ್ಯ ವೈರಲ್ ಆಗಿದೆ.  ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಲಾಂಗ್ ಹಿಡಿದುಕೊಂಡ ಸಂತೋಷ್ ರೆಡ್ಡಿ ಕೊಲೆ ಬೆದರಿಕೆ ಹಾಕಿದ್ದಾನೆ.

ಕುಪೇಂದ್ರ ಎನ್ನುವರೊಂದಿಗೆ ಕಾಮಗಾರಿ ಟೆಂಡರ್ ವಿಚಾರವಾಗಿ ಜಗಳವಾಡಿ ಗಲಾಟೆ ಸಂತೋಷ್ ರೆಡ್ಡಿ, ಲಾಂಗ್ ಹಿಡಿದು ಗ್ರಾಮದ ರಸ್ತೆಯಲ್ಲಿ ಓಡಾಡಿ ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲಾ ತಾಣಗಳಲ್ಲಿ ಪುಲ್ ವೈರಲ್ ಆಗಿದೆ.

ಈ ಹಿಂದೆ ಕೂಡ ಕಾಮಗಾರಿ ಗುತ್ತಿಗೆ ವಿಚಾರವಾಗಿ ಬಂಗಾರಪೇಟೆಯ ಮಾಗೊಂದಿ ಗ್ರಾಮ ಪಂಚಾಯ್ತಿ ಸದಸ್ಯ ಸೋಮಶೇಖರ ರೆಡ್ಡಿ ಸಹೋದರ ಸಂತೋಷ್ ರೆಡ್ಡಿ ಮತ್ತು ಕುಪೇಂದ್ರ ಗಲಾಟೆ ಮಾಡಿಕೊಂಡಿದ್ದರು.

ಪ್ರಕರಣ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights