‘ಶಿವಕುಮಾರ್ ಅರೆಸ್ಟ್ ಆದ್ರೆ ಸಾರ್ವಜನಿಕವಾಗಿ ಆತ ಸಿಂಪತಿ ಗಿಟ್ಟಿಸಿಕೊಳ್ತಾನೆ’ ಸಚಿವ ಮಾಧುಸ್ವಾಮಿ
ನಾನು ಪ್ರಾಮಾಣಿಕವಾಗಿ ಹೇಳ್ತೇನೆ ಡಿಕೆ,ಶಿವಕುಮಾರ್ ಬಂಧನವಾಗಲಿ ಎನ್ನೋ ಬಯಕೆ ನಮಗಿಲ್ಲ, ಶಿವಕುಮಾರ್ ಅರೆಸ್ಟ್ ಆದ್ರೆ ಸಾರ್ವಜನಿಕವಾಗಿ ಆತ ಸಿಂಪತಿ ಗಿಟ್ಟಿಸಿಕೊಳ್ತಾನೆ ಎನ್ನೋದು ನಮಗೆ ಗೊತ್ತು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಮಾತನಾಡಿದ ಅವ್ರು ಇಡಿ ಏನು ಅವರನ್ನ ಅಪರಾಧಿ ಎಂದು ತೀರ್ಮಾನ ಮಾಡಿಲ್ಲ, ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಸಹಕರಿಸದಿದ್ದರೆ ಬಂದಿಸೋದು ಸಹಜ ಆದ್ರೆ ತನಿಖಾ ಹಂತದಲ್ಲಿ ಸಹಕಾರ ಮಾಡಿಲ್ಲ ಎಂದು ಬಂಧಿಸಿದ್ದಾರೆ ಅಂತಾ ಹೇಳಿದ್ರು.
ಡಿಕೆಶಿ ವಿರುದ್ದ ದ್ವೇಷದ ರಾಜಕಾರಣ ಇಲ್ಲಾ ಎಂದ ಸಚಿವ ಮಾಧುಸ್ವಾಮಿ ತನಿಖೆಗೆ ಸಹಕಾರ ಮಾಡೋಕೆ ಹೇಳಲಿ, ತನಿಖೆಗೆ ಅವರು ಸಹಕಾರ ಮಾಡಲ್ಲಾ ಅಂದ್ರೆ ಏನ್ ಮಾಡ್ತಾರೆ ಹಾಗೆ ಬಿಡಿ ಎಂದು ಹೇಳೋಕಾಗುತ್ತಾ ಎಂದು ಪ್ರಶ್ನಿಸಿದರು.