ಸಿದ್ದರಾಮಯ್ಯ ಅವರನ್ನು ಎದೆಯಿಂದ ಎತ್ತಿ ದೂರವಿಟ್ಟ ಅನರ್ಹ ಶಾಸಕ ಎಂಟಿಬಿ ನಾಗರಾಜ್…

ನನ್ನ ಎದೆ ಬಗೆದರೆ ಕಾಣಿಸುವುದು ಸಿದ್ದರಾಮಯ್ಯ ಎಂದು ಹೇಳಿದ್ದು ಮಾತು ನಿಜ. ಆದರೆ ನಾನು ನನ್ನ ಎದೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಎತ್ತಿ ಸೈಡಿಗಿಟ್ಟಿದ್ದೇನೆ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಅನರ್ಹಗೊಂಡಿರುವ ಶಾಸಕರು ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್ ಈಗ ನನ್ನ ಹೃದಯದಲ್ಲಿ ಮತ ನೀಡುವ ಮತದಾರರಿದ್ದಾರೆ ಬೇರೆ ಯಾರು ಸಹ ಇಲ್ಲ.

ಸದ್ಯಕ್ಕೆ ಇನ್ನೂ ಸಿದ್ದರಾಮಯ್ಯ ಜಾಗಕ್ಕೆ ಯಾರು ಬಂದಿಲ್ಲ. ಕೋಲಾರದಲ್ಲಿ ಮಾಜಿ ಸಂಸದ ಕೆ ಎಚ್ ಮುನಿಯಪ್ಪನವ ಸೋಲಿಗೆ ಕಾರಣರಾದ ರಮೇಶ್ ಕುಮಾರ್ ಅವರನ್ನು ಹೈ ಕಮಾಂಡ್ ಮತ್ತು ಹಿರಿಯ ನಾಯಕರು ಮೊದಲು ಪಕ್ಷದಿಂದ ಉಚ್ಛಾಟನೆಗೊಳಿಸಬೇಕು ಎಂದು ಆಗ್ರಹಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights