ಹಾಲಿ, ಮಾಜಿ ಶಾಸಕರ ಜಟಾಪಟಿ : ಬೆಂಬಲಿಗರ ನಡುವೆ ಮಾರಾಮರಿ…!
ಹಾಲಿ ಮಾಜಿ ಶಾಸಕರ ನಡುವಿನ ಜಟಾಪಟಿಯಿಂದಾಗಿ ಅವರ ಬೆಂಬಲಿಗರ ನಡುವೆ ಮಾರಾಮರಿಯಾದ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಯಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ನಡೆದಿದೆ.
ಅಭಿವೃದ್ಧಿ ವಿಚಾರದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ವಾಗ್ವಾದ ನಡೆದಿದೆ. ಶಾಸಕರುಗಳ ಮಾತಿನಿಂದ ಪ್ರೇರೇಪಿತರಾದ ಬೆಂಬಲಿಗರ ನಡುವೆ ಮಾರಾಮಾರಿಯಾಗಿದೆ.
ವಾರ್ಷಿಕ ಸಭೆಯಲ್ಲಿ ಕೆ.ಸಿ.ವ್ಯಾಲಿ ವಿಚಾರ ಮಾತನಾಡುತ್ತಿದ್ದ ಹಾಲಿ ಶಾಸಕರನ್ನ ಮಾಜಿ ಶಾಸಕ ತಡೆದ ಪರಿಣಾಮ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಡುವೆ ಮಾತಿನ ಜಟಾಪಟಿ ನಡೆದಿದೆ.