ಹುಣಸೂರು ಉಪಚುನಾವಣೆ ಹಿನ್ನೆಲೆ : ಮತದಾರರಿಗೆ ಸೀರೆ ಪಾಲಿಟಿಕ್ಸ್ – ಏನಿದು ಬಿಜೆಪಿ ಮುಖಂಡನ ಗಿಮಿಕ್?
ಹುಣಸೂರು ಉಪಚುನಾವಣೆ ಹಿನ್ನೆಲೆ ಮತದಾರರಿಗೆ ಸೀರೆ ಹಂಚುವ ಪಾಲಿಟಿಕ್ಸ್ ನಡೆಯುತ್ತಿದೆ.
ಸ್ಪರ್ಧೆಗು ಮೊದಲೆ ಅಕ್ರಮ ನಡೆಸಲು ಮುಂದಾಗಿದ್ದ ಬಿಜೆಪಿ ಮುಖಂಡ ಯೋಗೇಶ್ವರ್, ಮತದಾರರಿಗೆ ಆಮಿಷ ಒಡ್ಡಲು ಸೀರೆ ಪಾಲಿಟಿಕ್ಸ್ಗೆ ಮುಂದಾಗಿದ್ದಾರೆ. ಹೌದು… ಚುನಾವಣೆಯಲ್ಲಿ ಹಂಚಲು ಅಕ್ರಮವಾಗಿ ಸಂಗ್ರಹಿದ್ದ ಸೀರೆ ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಶೇಖರಿಸಿಟ್ಟಿದ್ದ ಬರೋಬ್ಬರಿ 30 ಸಾವಿರ ಸೀರೆಗಳು ವಶಕ್ಕೆ ಪಡೆಯಲಾಗಿದೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್ಗೆ ಮತ ನೀಡಿ ಅನ್ನೋ ಕರಪತ್ರ ಇಡಲಾಗಿದೆ. ಚುನಾವಣೆ ಮೊದಲೆ ಸಭೆ ನಡೆಸಿದ್ದ ಯೋಗೇಶ್ವರ್, ಮತ ಪಡೆಯಲು ಸೀರೆ ನೀಡಲು ಮುಂದಾಗಿದ್ದಾರೆ.
ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳು ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳು ವಶಕ್ಕೆ ಪಡೆಯಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.