ಹುಣಸೂರು ಉಪಚುನಾವಣೆ ಹಿನ್ನೆಲೆ : ‘ಕೈ’ ಅಭ್ಯರ್ಥಿಗೆ ಹಣ ನೀಡಿದ ಜೇನು ಕುರುಬರು‌

ಸಾಮಾನ್ಯವಾಗಿ ಚುನಾವಣೆ ಅಂದರೆ ಅಭ್ಯರ್ಥಿಗಳು ಹಣ, ಸೀರೆ, ಹೆಂಡಾ ಕೊಟ್ಟು ಮತ ಗಿಟ್ಟಿಸಿಕೊಳ್ಳುವುದನ್ನ ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣ ಎಲ್ಲರನ್ನ ಆಶ್ಚರ್ಯಗೊಳಿಸಿದೆ.

ಹೌದು…. ಮತದಾರರೇ ಅಭ್ಯರ್ಥಿಗೆ ಚುನಾವಣೆ ಖರ್ಚಿಗಾಗಿ ಹಣ ನೀಡಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ಹುಣಸೂರು ಉಪಚುನಾವಣೆ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಅಭ್ಯರ್ಥಿ ಮಂಜುನಾಥ್‌ಗೆ ಜೇನು ಕುರುಬರು‌ ಹಣ ನೀಡಿದ್ದಾರೆ.

ಚುನಾವಣಾ ವೆಚ್ಚಕ್ಕಾಗಿ ಜೇನು ಸಂಗ್ರಹಿಸಿ ಮಾರಿದ 20 ಸಾವಿರ ಹಣವನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಿ ನೀಡಿದ್ದಾರೆ. ಈ ದೃಶ್ಯ ಸದ್ಯ ಭಾರೀ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights