ಪೇಜಾವರ ಶ್ರೀ ಅಗಲಿಕೆಗೆ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಂತಾಪ
ಪೇಜಾವರ ಸ್ವಾಮೀಜಿ ಅಗಲಿಕೆಗೆ ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ವಿಶ್ವೇಶ ತೀರ್ಥರು 7ನೇ ವರ್ಷಕ್ಕೆ ದೀಕ್ಷೆ ಪಡೆದರು. ನಮಗೆ 11 ವರ್ಷ ಆಗಿದ್ದಾಗ, ಅವರಿಗೆ 19 ವರ್ಷ. ಮೈಸೂರಿನ ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ್ ದೇವಾಲಯ ಕಟ್ಟಿಸಿದ್ದರು. ಆಗ ನಾವಿಬ್ಬರೂ ಭೇಟಿಯಾಗಿದ್ದೆವು. ಅಂದಿನಿಂದಲೂ ನಿಕಟ ಸಂಪರ್ಕವಿತ್ತು. ಪೇಜಾವರ ಶ್ರೀಪಾದರು ಸಾಮಾಜಿಕ, ಧಾರ್ಮಿಕವಾಗಿ ಅಪಾರ ಸಾಧನೆ ಮಾಡಿದ್ದಾರೆ. ಪೇಜಾವರ ಶ್ರೀಪಾದರು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಲ್ಲ. ಮುಸ್ಲಿಂ, ಕ್ರೈಸ್ತರು, ದಲಿತರನ್ನು ಒಳಗೊಳ್ಳುತ್ತಿದ್ದರು. ಯತಿಗಳಿಗೆ ಜೀವಿತಾವಧಿ ಲೆಕ್ಕವಿಲ್ಲ, ದೇಹಕ್ಕೆ ಮಾತ್ರ ವಯಸ್ಸು ಆಗಿತ್ತು ಎಂದು ಮೈಸೂರಿನಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೋವಿನ ಮಾತನಾಡಿದ್ದಾರೆ.
ಪೇಜಾವರ ಶ್ರೀಪಾದರು ನಿಧನ ಹಿನ್ನೆಲೆ ರಾಜವಂಶಸ್ಥ ಯದುವೀರ ಕೃಷ್ಟದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಹಂಚಿಕೊಂಡ ಯದುವೀರ. ವಿಶ್ವೇಶ್ವ ತೀರ್ಥ ಶ್ರೀಪಾದರು ದೈವಾದೀನರಾಗಿರುವುದು ಬಹಳ ದುಃಖ ವಾಗಿದೆ. ಬಾಲ್ಯದಲ್ಲೇ ವೈಯಕ್ತಿಕ ಜೀವನ ತ್ಯಜಿಸಿ 80 ವರ್ಷ ಕೃಷ್ಣನ ಸೇವೆ ಮಾಡಿದ್ದಾರೆ. ಸಮಾಜ ಸುಧಾರಣೆಗೆ ತಮ್ಮ ಜೀವನ ಮುಡುಪಿಟ್ಟಿದ್ದರು. ಶ್ರೀಗಳ ಹಗಲಿಕೆಯ ದುಃಖ ಬರಿಸುವ ಶಕ್ತಿಯನ್ನು ಚಾಮುಂಡೇಶ್ವರಿ ನೀಡಲಿ. ಪೇಜಾವರ ಸ್ವಾಮೀಜಿ ಮತ್ತು ಜಯಚಾಮರಾಜ ಒಡೆಯರ್ ಅವರ ಇರುವ ಹಳೆಯ ಭಾವಚಿತ್ರ ಶೇರ್ ಮಾಡಿದ್ದಾರೆ.
ಮೈಸೂರಿನಲ್ಲಿ ಪೇಜಾವರಶ್ರೀಗಳಿಗೆ ಸಾಹಿತಿ ಕೆ.ಎಸ್. ಭಗವಾನ್ ರಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ
ಬುದ್ದಮಂದಿರದಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಶ್ರೀಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಬಹಳಷ್ಟು ಆಘಾತವಾಗಿದೆ. ಅವರು ಇಷ್ಟು ಬೇಗ ನಿಧನ ಆಗುತ್ತಾರೆ ಅಂತಾ ನಾವು ಭಾವಿಸಿದ್ದಿಲ್ಲ. ಇವತ್ತು ಪೇಜಾವರ ಶ್ರೀಗಳು ಎಲ್ಲಾ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಪ್ಪಳದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ.
ಶ್ರೀಗಳು ಯಾವುದೇ ಜಾತಿ, ಧರ್ಮ ಪಂಥ ನೋಡದೆ ಸಮಾನತೆ ಕಂಡವರು. ಅನೇಕ ದಲಿತ ಕೇರಿಗಳಿಗೆ ಹೋಗಿ, ಅಲ್ಲೇ ವಾಸ್ತವ್ಯ ಹೂಡಿ ಉಪಹಾರ ಸೇವಿಸಿ ಪಾದಯಾತ್ರೆ ಮಾಡಿದ್ದಾರೆ. ಎಲ್ಲರಿಗೆ ಸಮಾನತೆ ನೀಡಿ, ಕೆಳ ಸಮುದಾಯಗಳಿಗೆ ಗೌರವ ನೀಡಿ ಅಗಲಿದ್ದಾರೆ. ಶ್ರೀಗಳು ನನಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ನೀವು ಹಾಗೂ ಸಂಗಣ್ಣ ಅವರು ಗೆಲ್ಲಬೇಕು ಅಂತಾ ಆಶೀರ್ವಾದ ನೀಡಿದ್ದರು. ಅನೇಕ ಬಾರಿ ಅವರೊಂದಿಗೆ ನಾನು ಚರ್ಚೆ ನಡೆಸಿದ್ದೇನೆ. ಅವರ ಮಾರ್ಗದರ್ಶನ ಪಡೆದಿದ್ದೇನೆ. ಬಹಳಷ್ಟು ಭಕ್ತರು ಅವರ ಅಗಲಿಕೆಯಿಂದ ಆಘಾತಗೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಶ್ರದ್ಧಾಂಜಲಿ ಸಲ್ಲಿಸಿದರು.