ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಡಳಿತ ಚಿಂತನೆ : ಗಣಿಗಾರಿಕೆ ಪರ ಶಾಸಕನಿಂದ ಬ್ಯಾಟಿಂಗ್

ಒಂದು ಕಡೆ ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದ್ದರೆ  ಮತ್ತೊಂದು ಕಡೆ ಜಿಲ್ಲೆಯ ಅಕ್ರಮ ಗಣಿಗಾರಿಕೆ ಪರ ಜಿಲ್ಲೆಯ ಶಾಸಕನಿಂದ ಬ್ಯಾಟಿಂಗ್ ನಡೆಯುತ್ತಿದೆ.

ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುವಂತೆ ಜಿಲ್ಲಾಡಳಿತಕ್ಕೆ ಶಾಸಕರಿಂದ ಒತ್ತಾಯ ಕೇಳಿಬುತ್ತಿದೆ. ಮಂಡ್ಯ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಜಿಲ್ಲೆಯಲ್ಲಿ ಕೋಟ್ಯಾಂತರ ರೂ ಅಭಿವೃದ್ದಿ ಕಾಮಗಾರಿ ನಡೆಯ ಬೇಕಾದ್ರೆ ಜಲ್ಲಿ,ಕಲ್ಲು,ಮರಳು ಎಲ್ಲಿಂದ ತರ್ತೀರಾ? ಎಲ್ಲಾ ಕಡೆ ಅಕ್ರಮ ಎಂದು ಬೀಗ ಹಾಕಿದ್ರೆ ಏನ್ ಮಾಡಬೇಕು?  ನಾನು ಹಿಂದಿನಿಂದಲೇ ಹೇಳ್ತಾ ಬರ್ತಾ ಇದ್ದೀನಿ ಅಕ್ರಮವನ್ನು ಸಕ್ರಮ ಮಾಡಿ ಎಂದು. ಆದರೆ ಅಂತಹಕ್ಕೆ ಕಾನೂನು ಬದ್ದವಾಗಿ ಪೆನಾಲ್ಟಿ ಹಾಕಿ, ಏನ್ ಲೋಪ ಇದೆ ಅದನ್ನ ಸರಿ ಮಾಡಿಕೊಂಡು ರಾಯಲ್ಟಿ ತಗೊಂಡು ಸಕ್ರಮ ಮಾಡಿ.

ಈಗ ಮರಳು ಕೂಡ ಸಿಗ್ತಿಲ್ಲ,ಬಡವರು ಮನೆ ಕಟ್ಟೋದು ಹೇಗೆ? ಅವ್ರಿಗೆ ಮರಳು ಸಿಗ್ತಿಲ್ಲ,ಎಂ ಸ್ಯಾಂಡ್ ಕೂಡ ಸಿಗೋದಿಲ್ಲ ಅಂದ್ರೆ‌ಏನ್ ಮಾಡಬೇಕು? ಗಣಿಗಾರಿಕೆ ಅಂತ ತಕ್ಷಣ ಅದನ್ನ ಅಕ್ರಮ ಅನ್ನೋ ಭಾವನೆ ಬಿಡಬೇಕು. ನಮ್ಮ ಭಾಗದ ಅಭಿವೃದ್ಧಿ ಯಾಗಬೇಕಿದ್ರೆ ಗಣಿಗಾರಿಕೆ ಬಹಳ ಮುಖ್ಯ. ಅದನ್ನ ಸಕ್ರಮ ಮಾಡೋ ಜವಬ್ದಾರಿ ಜಿಲ್ಲಾಡಳಿತದ ಮೇಲಿದೆ.

ಜವಬ್ದಾರಿ ಹೊತ್ತಂತವರು ಅದನ್ನ ಪ್ರಾಕ್ಟಿಕಲ್ ಆಗಿ ಅದನ್ನ ಲೀಗಲೈಸ್ ಮಾಡಿ ರಾಯಲ್ಟಿ ತಗೊಂದು ಅದನ್ನ ರೆಗ್ಯೂಲೇಜ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights