ವಿಶ್ವವಿಖ್ಯಾತ ಮೈಸೂರು ಯುವದಸರಾದಲ್ಲಿ ರಾಣು ಮೊಂಡಲ್ ಕಾರ್ಯಕ್ರಮ….
ಮುಂಬೈನ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾಣು ಮೊಂಡಲ್ ಸದ್ಯ ಬಾಲಿವುಡ್ ಚಿತ್ರಗಳಿಗೆ ಹಾಡುಗಾರ್ತಿ. ಈಗ ವಿಶ್ವವಿಖ್ಯಾತ ಮೈಸೂರು ಯುವದಸರಾದ ಉದ್ಘಾಟನೆಯಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಕುತೂಹಲ ಕೆರಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಮೆಚ್ಚುಗೆ ಪಡೆದು ನಂತರ ಹಿಮೇಶ್ ರೆಶಮಿಯಾ ಚಿತ್ರಕ್ಕೆ ಗಾಯಕಿಯಾದ ರಾಣು ಮೊಂಡಲ್ ಯುವದಸರಾದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.
ಹೌದು… ಈ ಬಾರಿ ದಸರಾ ಉದ್ಘಾಟನೆಯ ಮೊದಲನೇ ದಿನವೇ ರಾಣು ಮೊಂಡಲ್ ಕಾರ್ಯಕ್ರಮ ನೀಡಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಯುವಜನತೆಗೆ ಸಾಧನೆಯ ಸಂದೇಶ ಸಾರುವ ಸಲುವಾಗಿ ರಾಣುಮೊಂಡಲ್ಗೆ ಅವಕಾಶ ನೀಡಿಲಾಗಿದ್ದು, ಯುವದಸರಾ ವೇದಿಕೆಯಲ್ಲಿ ರಾಣುಮೊಂಡಲ್ರನ್ನ ಉಪಸಮಿತಿ ಸನ್ಮಾನಿಸಲಿದೆ.
ಮೈಸೂರಿನ ಯುವ ದಸರಾದಲ್ಲಿ ಹಾಡಲಿದ್ದಾರೆ ತೇರಿಮೇರಿ ಸ್ಟಾರ್ ಭಾಗವಹಿಸಲಿದ್ದು, ಇವರೊಂದಿಗೆ ಯುವದಸರಾ ಉದ್ಘಾಟನೆಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಗಮಿಸಲಿದ್ದಾರೆ. ಅ.1 ರಿಂದ ಅ.6ರವರೆಗೆ ನಡೆಯಲಿರುವ ಯುವದಸರಾಕ್ಕೆ ಈ ಪಿ.ವಿ ಸಿಂಧು ಹಾಗೂ ರಾಣು ಮೊಂಡಲ್ ಚಾಲನೆ ನೀಡಲಿದ್ದಾರೆ.